ಜ್ಯೋತಿಷಿಗಳ ಸಲಹೆಯಂತೆ ವಿಧಾನಸೌಧಕ್ಕೆ ಬರಿಗಾಲಿನಲ್ಲಿ ಆಗಮಿಸಿದ ರೇವಣ್ಣ
ಬೆಂಗಳೂರು, ಜು.15: ಮೈತ್ರಿ ಸರಕಾರದ ಉಳಿವಿಗಾಗಿ ಕಳೆದೊಂದು ವಾರದಿಂದ ದೇವಸ್ಥಾನಗಳನ್ನು ಸುತ್ತಾಡಿದ್ದ ಸಚಿವ ಎಚ್.ಡಿ.ರೇವಣ್ಣ, ಜ್ಯೋತಿಷಿಗಳ ಸಲಹೆಯಂತೆ ವಿಧಾನಸೌಧಕ್ಕೆ ಬರಿಗಾಲಿನಲ್ಲಿ ಆಗಮಿಸುವ ಮೂಲಕ ಗಮನ ಸೆಳೆದಿದ್ದಾರೆ.
ವಿಧಾನಸಭಾ ಅಧಿವೇಶನಕ್ಕೂ ಮೊದಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಸುಮಾರು ಒಂದು ತಾಸಿಗೂ ಅಧಿಕ ಸಮಯ ಚರ್ಚೆ ನಡೆಸಿದರು. ಅನಂತರ ಬರಿಗಾಲಿನಲ್ಲಿಯೇ ಕಾರನ್ನು ಹತ್ತಿದ ಅವರು, ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದರು.
Next Story