ಐಎಂಎ ವಂಚನೆ ಪ್ರಕರಣ: ವಾಗ್ಮಿ ಉಮರ್ ಶರೀಫ್ ಬಂಧನ
ಬೆಂಗಳೂರು, ಜು.18: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಧಾರ್ಮಿಕ ಪ್ರವಚಕರೊಬ್ಬರನ್ನು ಸಿಟ್(ಎಸ್ಐಟಿ) ಗುರುವಾರ ಬಂಧಿಸಿದೆ.
ನಗರದ ನಿವಾಸಿ ವಾಗ್ಮಿ, ಧಾರ್ಮಿಕ ಪ್ರವಚಕ ಉಮರ್ ಶರೀಫ್ (42) ಬಂಧಿತ ವ್ಯಕ್ತಿ ಎಂದು ಸಿಟ್ ತಿಳಿಸಿದೆ.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ಅಲ್ ಬಶೀರ್ ಎಂಬ ಹೆಸರಿನ ಶಾಲೆಯನ್ನು ನಡೆಸುತ್ತಿರುವ ಆರೋಪಿ ಉಮರ್ ಶರೀಫ್, ಐಎಂಎ ಮತ್ತು ಮನ್ಸೂರ್ ಖಾನ್ ಪರ ಪ್ರಚಾರ ನಡೆಸಲು ಕಳೆದ 5 ವರ್ಷಗಳಲ್ಲಿ 60 ಲಕ್ಷ ನಗದು ಹಾಗೂ 15 ಲಕ್ಷ ರೂ.ಮೌಲ್ಯದ ವಾಹನವೊಂದನ್ನು ಪಡೆದಿದ್ದರು ಎನ್ನಲಾಗಿದೆ.
ಆರೋಪಿ ಉಮರ್ ಶರೀಫ್ ರನ್ನು ಜು.22ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿರುವ ಸಿಟ್, ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ.
Next Story