ಚರ್ಚೆ ಮುಗಿಯುವ ತನಕ ವಿಶ್ವಾಸ ಮತಕ್ಕೆ ಹಾಕುವುದಿಲ್ಲ: ಸ್ಪೀಕರ್ ಸ್ಪಷ್ಟನೆ
ಬೆಂಗಳೂರು, ಜು.19: ಚರ್ಚೆ ಮುಗಿಯುವ ತನಕ ವಿಶ್ವಾಸ ಮತಕ್ಕೆ ಹಾಕುವುದಿಲ್ಲ. ನಿಮಗೆ(ಯಡಿಯೂರಪ್ಪ)ಆತುರವಿರಬಹುದು. ನನಗಿಲ್ಲ. ವಿಶ್ವಾಸ ಮತ ಹಾಕುವುದಕ್ಕೆ ಒಂದು ಪ್ರಕ್ರಿಯೆ ಇದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸಷ್ಟನೆ ನೀಡಿದರು.
ರಾಜ್ಯಪಾಲರು ಇಂದು ಮಧ್ಯಾಹ್ನ 1:30ಕ್ಕೆ ವಿಶ್ವಾಸ ಮತ ಯಾಚನೆಗೆ ನಿರ್ದೇಶಿಸಿದ್ದರು. ಸರಕಾರ ರಾಜ್ಯಪಾಲರ ಗಡುವು ಮೀರಿದಾಗ, ಎದ್ದುನಿಂತ ವಿಪಕ್ಷ ನಾಯಕ ಯಡಿಯೂರಪ್ಪ, ವಿಶ್ವಾಸ ಮತಕ್ಕಾಗಿ ಸ್ಪೀಕರ್ಗೆ ಮನವಿ ಮಾಡಿದರು.
ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 3ರ ತನಕ ಮುಂದೂಡಿದ್ದಾರೆ.
Next Story