ಟಿಪ್ಪರ್ ಲಾರಿ ಹರಿದು ವೃದ್ಧೆ ಸಾವು
ಬೆಂಗಳೂರು, ಜು.21: ನಗರದ ವರ್ತೂರಿನ ಧರ್ಮರಾಯಸ್ವಾಮಿ ದೇವಾಲಯದ ಬಳಿ ರಸ್ತೆ ದಾಟುತ್ತಿದ್ದ ವೃದ್ಧೆಯೊಬ್ಬರು ಟಿಪ್ಪರ್ ಲಾರಿ ಹರಿದು ಮೃತಪಟ್ಟಿರುವ ದುರ್ಘಟನೆ ಶನಿವಾರ ಸಂಜೆ ನಡೆದಿದೆ.
ಮಧುರಾ ನಗರದ ಚಿನ್ನಮ್ಮ (80) ಮೃತಪಟ್ಟಿರುವ ವದ್ಧೆ ಎಂದು ಪೊಲೀಸರು ಗುರುತಿಸಿದ್ದಾರೆ.
ಶನಿವಾರ ಸಂಜೆ ಮಧುರಾ ನಗರದ ಬಳಿ ಚಿನ್ನಮ್ಮ ರಸ್ತೆ ದಾಟುವಾಗ ಹಾಲಬಾವಿ ರಸ್ತೆ ಮಾರ್ಗವಾಗಿ ಬಂದ ಟಿಪ್ಪರ್ ಲಾರಿ ಏಕಾಏಕಿ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆ ಸಂಬಂಧ ಲಾರಿ ಚಾಲಕ ಮಧು ಎಂಬಾತನನ್ನು ಬಂಧಿಸಿರುವ ವೈಟ್ಫೀಲ್ಡ್ ಸಂಚಾರ ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story