ಮುಂದೊಂದು ದಿನ ಶ್ರೀಮಂತ್ ಪಾಟೀಲ್ ಸ್ಥಿತಿ ಬಿಜೆಪಿಯವರಿಗೂ ಬರಲಿದೆ: ಶಾಸಕ ರಾಜೇಗೌಡ
ಬೆಂಗಳೂರು, ಜು. 23: ‘ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅತೃಪ್ತರಿಗೆ ತಲಾ 40ರಿಂದ 50 ಕೋಟಿ ರೂ.ಗಳಷ್ಟು ಹಣ ನೀಡಿದ್ದು, ಸರಕಾರ ಬೀಳಿಸಲು 1 ಸಾವಿರ ಕೋಟಿ ರೂ.ಹಣ ಹೂಡಿಕೆ ಮಾಡಿದ್ದಾರೆಂದು ಜನ ಮಾತನಾಡುತ್ತಾರೆ. ಈ ಹಣ ಎಲ್ಲಿಂದ ಬಂತು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು’ ಎಂದು ಕಾಂಗ್ರೆಸ್ ಸದಸ್ಯ ಟಿ.ಡಿ.ರಾಜೇಗೌಡ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲೆ ಮುಂದುವರಿದ ಚರ್ಚೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ಇಷ್ಟೊಂದು ದೊಡ್ಡ ಮೊತ್ತದ ಹಣ ಯಾವ ಮೂಲದಿಂದ ಬಂದಿದೆ ಎಂದು ಹೇಳಲೇಬೇಕು ಎಂದು ಕೋರಿದರು.
ಮುಂದೊಂದು ದಿನ ಶಾಸಕ ಶ್ರೀಮಂತ್ ಪಾಟೀಲ್ ಸ್ಥಿತಿ ಬಿಜೆಪಿಯವರಿಗೂ ಬರಲಿದೆ ಎಂದು ಪಾಟೀಲ್ ಆಸ್ಪತ್ರೆಗೆ ದಾಖಲಾಗಿರುವ ಪೋಟೋವನ್ನು ಪ್ರದರ್ಶಿಸಿದರು.
Next Story