ಆ.18: ಮತೀಯ ಸೌಹಾರ್ದತೆ ಕಾರ್ಯಕ್ರಮ
ಬೆಂಗಳೂರು, ಆ.17: ಇಂದಿರಾನಗರದ ಮಸ್ಜಿದೆ ಉಮ್ಮುಲ್ ಹಸ್ನೈನ್ ವತಿಯಿಂದ ಆ.18ರಂದು ಬೆಳಗ್ಗೆ 10.30ಕ್ಕೆ ಮಸೀದಿಯ ಆವರಣದಲ್ಲಿ ಮತೀಯ ಸೌಹಾರ್ದತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮದ್ರಸಾ ಎ ಇಸ್ಲಾಹುಲ್ ಬನಾತ್ ಮುಖ್ಯಸ್ಥ ಮೌಲಾನ ಸಯ್ಯದ್ ಶಬ್ಬೀರ್ ಅಹ್ಮದ್ ನದ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ತತ್ವರೂಪಾನಂದ, ಪತ್ರಕರ್ತ ಉದಯ ಧರ್ಮಸ್ಥಳ, ಫಾದರ್ ಗೆರಾಲ್ಡ್ ಸ್ಮಿತ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಬಲ್ಜೀತ್ ಸಿಂಗ್, ಜಮೀಯ್ಯತ್ ಉಲಮಾ ಹಿಂದ್ ಕಾರ್ಯದರ್ಶಿ ಮುಫ್ತಿ ಶಂಸುದ್ದೀನ್ ಬಜ್ಲಿ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಹಾಗೂ ಬಿಬಿಎಂಪಿ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಕುಮಾರ್ ಪಾಲ್ಗೊಳ್ಳಲಿದ್ದಾರೆ.
Next Story