ಶ್ರೇಷ್ಠ ಉತ್ಪಾದನೆ: ಡೆಕ್ಕನ್ ಪ್ಲಾಸ್ಟ್ ಸಂಸ್ಥೆಗೆ ಪ್ರಶಸ್ತಿ
ಬೆಂಗಳೂರು, ಸೆ.6: ಕರ್ನಾಟಕ ಸರಕಾರವು ಅತ್ಯುತ್ತಮ ಸಾಧನೆಗೈದ ಕೈಗಾರಿಕೋದ್ಯಮಿಗಳಿಗೆ ನೀಡುವ ಸರ್ ಎಂ. ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಪ್ರಶಸ್ತಿ ಮಂಗಳೂರಿನ ಡೆಕ್ಕನ್ ಪ್ಲಾಸ್ಟ್ ಸಂಸ್ಥೆಯ ಮುಖ್ಯಸ್ಥ ಅಸ್ಗರ್ ಆಲಿ ಅವರಿಗೆ ದೊರೆತಿದೆ.
ಶುಕ್ರವಾರ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಸ್ಗರ್ ಆಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಅತ್ಯತ್ತಮ ಸಾಧನೆಗೈದ ಕೈಗಾರಿಕಾ ಉದ್ಯಮಗಳಿಗೆ ರಾಜ್ಯ ಸರಕಾರ ಈ ಪ್ರಶಸ್ತಿ ನೀಡುತ್ತಿದೆ. ಕಳೆದ ಮೂರು ದಶಕಗಳಿಂದ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಡೆಕ್ಕನ್ ಪ್ಲಾಸ್ಟ್ ಸಂಸ್ಥೆ, ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಬೃಹತ್ ಘಟಕಗಳನ್ನು ಹೊಂದಿದೆ.
Next Story