ಬೆಂಗಳೂರು: ಹೆಚ್ಚುವರಿ ಸಂಚಾರಿ ಡಿಜಿಟಲ್ ತಾರಾಲಯ ಉದ್ಘಾಟನೆ
ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ಹೆಚ್ಚುವರಿ ಸಂಚಾರಿ ಡಿಜಿಟಲ್ ತಾರಾಲಯ ಉದ್ಘಾಟನೆಯು ರವಿವಾರ ನಡೆಯಿತು.
ಈ ಹೆಚ್ಚುವರಿ ಸಂಚಾರಿ ತಾರಾಲಯದ ಉದ್ಘಾಟನೆಯನ್ನು ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವಥ್ ನಾರಾಯಣ್ ಅವರು ವಿಧಾನ ಸೌಧದ ಮುಂಭಾಗ ನೆರವೇರಿಸಿದರು.
ನಂತರ ಮಾತನಾಡಿದ ಅವರು ಶಾಲೆಯ ಅಂಗಳದಲ್ಲಿಯೇ ತಾರಾಲಯ ಎಂಬ ಕಲ್ಪನೆಯಡಿಯಲ್ಲಿ ಖಗೋಳ ವಿಜ್ಞಾನದ ಮಾಹಿತಿಯನ್ನು ನೀಡುವುದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಜ್ಞಾನವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಡಾ. ಯು.ಟಿ. ಇಫ್ತಿಕಾರ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.