ರಾಜಕಾರಣದಲ್ಲಿ ತಾಳ್ಮೆ ಬಹುಮುಖ್ಯ: ಮೇಯರ್ ಗೌತಮ್ ಕುಮಾರ್
ಬೆಂಗಳೂರು, ಅ.12: ರಾಜಕಾರಣದಲ್ಲಿ ತಾಳ್ಮೆ ಬಹುಮುಖ್ಯ ಎಂದು ಮೇಯರ್ ಗೌತಮ್ ಕುಮಾರ್ ಹೇಳಿದರು.
ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನೂತನ ಮೇಯರ್ಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಂಘಟನೆಯಲ್ಲಿ ನಾಯಕತ್ವದ ಗುಣ ಮಖ್ಯವಾಗುತ್ತದೆ. ತಾಳ್ಮೆಯಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಂಘಟನೆ ಹೇಳುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಉನ್ನತ ಸ್ಥಾನ ದೊರಕುತ್ತದೆ. ಅದಕ್ಕೆ ನಾನೇ ಉದಾಹರಣೆ ಎಂದು ಹೇಳಿದರು.
ಶಾಸಕ ಸುನೀಲ್ ಕುಮಾರ್ ಮಾತನಾಡಿ, ರಾಜಕೀಯವಾಗಿ ಬೆಳೆಯಲು ಯುವ ಮೋರ್ಚಾ ಒಂದು ಉತ್ತಮ ವೇದಿಕೆ. ಜಾಲತಾಣದಲ್ಲಿ ಸಕ್ರಿಯವಾಗಿರುವುದರಿಂದ ನಾಯಕತ್ವದ ಗುಣ ಬೆಳೆಯುವುದಿಲ್ಲ. ಪಕ್ಷದ ನೇತೃತ್ವ ವಹಿಸಿಕೊಂಡು ಪಕ್ಷ ಹೇಳುವ ಕೆಲಸ ಮಾಡುವದರಿಂದ ನಾಯಕತ್ವದ ಗುಣ ಬರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವ ಮೋರ್ಚಾದ ಎಸ್.ವಿ ರಾಘವೆಂದ್ರ, ದೀಪಕ್ ಜಮಖಂಡಿ, ಅಶೋಕ್ ಹೊಕ್ರಾಣಿ, ಸಂಜೀವ್ ಪಾಟೀಲ್ ಮಹೇಶ್, ಸಂಜಯ್ ಮತ್ತಿತರರಿದ್ದರು.
Next Story