ಚಿಪ್ಪಂದಿ ಮಾರಾಟ: ಇಬ್ಬರ ಬಂಧನ
ಬೆಂಗಳೂರು, ಅ.21: ಬಳ್ಳಾರಿಯ ಸಂಡೂರಿನ ಕುಮಾರಸ್ವಾಮಿ ಗುಡ್ಡದ ಕಾಡಿನಿಂದ ಚಿಪ್ಪಂದಿ (ಪಂಗೋಲಿನ್) ಹಿಡಿದು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಂದಿನಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಂಡೂರಿನ ಸುರೇಶ್, ಆಂಧ್ರದ ರಾಯದುರ್ಗದ ಮಧುಸೂದನ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕುಮಾರಸ್ವಾಮಿ ಗುಡ್ಡದ ಬಳಿಯ ಕಾಡಿನಿಂದ ಚಿಪ್ಪಂದಿ ಹಿಡಿದು ತಂದು ಕೂಲಿ ನಗರ ಬ್ರಿಡ್ಜ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ಕೈಗೊಂಡ ನಂದಿನಿ ಲೇಔಟ್ ಪೊಲೀಸರು ಆರೋಪಿಗಳನ್ನು ಬಂಧಿಸಿ, ಎರಡು ಚಿಪ್ಪಂದಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
Next Story