ಗೋಡೆಯ ಕಲ್ಲು ಬಿದ್ದು ಟ್ರ್ಯಾಕ್ಟರ್ ಚಾಲಕ ಮೃತ್ಯು
ಬೆಂಗಳೂರು, ಡಿ.11: ಜಮೀನಿನ ಬಳಿ ನಿರ್ಮಿಸಿದ್ದ ಗೋಡೆಯ ಮೇಲ್ಭಾಗದ ಕಲ್ಲು ಕುಸಿದು ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಾಗಡಿಯ ಚನ್ನಮ್ಮನ ಪಾಳ್ಯದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮಾಗಡಿಯ ಚನ್ನಮ್ಮನ ಪಾಳ್ಯದ ಶಂಕರ್(34) ಮೃತರು ಎಂದು ಪೊಲೀಸರು ಗುರುತಿಸಿದ್ದಾರೆ.
ಚನ್ನಮ್ಮನ ಪಾಳ್ಯದ ಸಿವಿಲ್ ಇಂಜಿನಿಯರ್ ಗಿರಿಯಪ್ಪ ಅವರ ಜಮೀನಿನ ರಾಗಿ ಹುಲ್ಲನ್ನು ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ಶಂಕರ್ ಬರುತ್ತಿದ್ದ ವೇಳೆ ಎತ್ತರವಾಗಿದ್ದ ಹುಲ್ಲು ಕಮಾನಿನ ಮೇಲ್ಭಾಗದ ಕಲ್ಲಿಗೆ ತಾಕಿದೆ. ಪರಿಣಾಮ ಕಲ್ಲು ಶಂಕರ್ ಮೇಲೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Next Story