ಕ್ಯಾಂಪಸ್ ಫ್ರಂಟ್ ವತಿಯಿಂದ ಡಿ.14ರಂದು 'ದಸ್ತೂರ್ ಬಚಾವೋ' ಪ್ರತಿಭಟನೆ
ಬೆಂಗಳೂರು, ಡಿ.13: ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಆಡಳಿತ ಹಾಗೂ ಜನ ವಿರೋಧಿ ನೀತಿಗಳು ಮತ್ತು ಬಾಬರಿ ಮಸೀದಿಯ ಅನ್ಯಾಯದ ತೀರ್ಪನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಡಿ.14ರಂದು ಬೆಂಗಳೂರಿನ ಪುರ ಭವನದಲ್ಲಿ 'ದಸ್ತೂರ್ ಬಚಾವೋ' ಪ್ರತಿಭಟನೆ ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿಯ ಸದಸ್ಯ ಮುಹಮ್ಮದ್ ತಫ್ಸೀರ್, ಬಿಜೆಪಿ ತರುತ್ತಿರುವ ಜನವಿರೋಧಿ ಮಸೂದೆಗಳನ್ನು ಒಪ್ಪಲಾಗದು. ಇದರ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಿ ಆಂದೋಲನ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಸಮಿತಿಯ ಸದಸ್ಯ ಮುಹಮ್ಮದ್ ಇರ್ಷಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವದಕತ್ ಶಾ, ಕಾರ್ಯದರ್ಶಿ ಅಥಾವುಲ್ಲಾ ಜಿಲ್ಲಾಧ್ಯಕ್ಷ ಝುಬೈರ್ ಉಪಸ್ಥಿತರಿದ್ದರು.
Next Story