3ನೆ ಮಹಡಿಯಿಂದ ಕೆಳಗೆ ಬಿದ್ದು ಮುಖ್ಯಪೇದೆ ಸಾವು
ಬೆಂಗಳೂರು, ಫೆ.12: ರಾಜ್ಯ ಮೀಸಲು ಪಡೆ(ಕೆಎಸ್ಆರ್ ಪಿ)ಯ ಪೊಲೀಸ್ ಮುಖ್ಯ ಪೇದೆಯೊಬ್ಬರು ಪೊಲೀಸ್ ವಸತಿ ಗೃಹದ 3ನೆ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಕೋರಮಂಗಲದ ಕೆಎಸ್ರ್ಆಪಿ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ಮುಖ್ಯ ಪೇದೆ ದತ್ತಾತ್ರೇಯ ಅಣ್ಣಾಭಟ್ ಮುದ್ರೆ(59), ಮುಂಜಾನೆ 5.30ರ ವೇಳೆ ವಸತಿ ಗೃಹದ 3ನೆ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಮುದ್ರೆ ಅವರು ಆಯತಪ್ಪಿ ಕೆಳಗೆ ಬಿದ್ದರೋ ಇಲ್ಲವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎನ್ನುವುದು ಸದ್ಯಕ್ಕೆ ತಿಳಿದು ಬಂದಿಲ್ಲ.
ಪ್ರಕರಣ ದಾಖಲಿಸಿಕೊಂಡಿರುವ ಇಲ್ಲಿನ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story