ಬಜೆಟ್ ವಿಶೇಷತೆಯ ಸುಳಿವು ಬಿಟ್ಟುಕೊಟ್ಟ ಸಿಎಂ ಯಡಿಯೂರಪ್ಪ
ಬೆಂಗಳೂರು, ಮಾ.5: ಬಹುನಿರೀಕ್ಷಿತ 2020-21ನೇ ಸಾಲಿನ ಬಜೆಟ್ ಮಂಡನೆಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಳಗ್ಗೆ ಬಜೆಟ್ ಪ್ರತಿಯೊಂದಿಗೆ ಹಸಿರು ಶಾಲು ಹೊದ್ದು ನಿವಾಸದಿಂದ ಹೊರಟಿದ್ದಾರೆ.
ಮಲ್ಲೇಶ್ವರಂನ ರಾಯರ ಮಠಕ್ಕೆ ಆಗಮಿಸಿದ ಯಡಿಯೂರಪ್ಪ ಅಲ್ಲಿ ಬಜೆಟ್ಗೆ ಪ್ರತಿಗೆ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ, ರೈತ ಪರ ಬಜೆಟ್ ಮಂಡಿಸಲು ಪ್ರಯತ್ನ ಮಾಡಿದ್ದೇನೆ. ಯಾವುದೇ ಯೋಜನೆಗಳನ್ನು ಕಡಿತಗೊಳಿಸಲ್ಲ. ರಾಜ್ಯದಲ್ಲಿ ಈ ಬಾರಿಯೂ ಉತ್ತಮ ಮಳೆ, ಬೆಳೆಯಾಗಿ ರೈತರು, ಜನಸಾಮಾನ್ಯರು ನೆಮ್ಮದಿ ಜೀವ ನಡೆಸುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಈ ಸಂದರ್ಭ ಡಿಸಿಎಂ ಅಶ್ವತ್ಥ್ ನಾರಾಯಣ್ ಸೇರಿ ಸಚಿವರು, ಶಾಸಕರು ಜೊತೆಗಿದ್ದರು.
Next Story