ನಟಿ ಶರ್ಮಿಳಾ ಕಾರು ಅಪಘಾತ ಪ್ರಕರಣ: ಮಾಹಿತಿ ನೀಡಲು ಪೊಲೀಸರು ಹಿಂದೇಟು ?
ಬೆಂಗಳೂರು, ಎ.9: ಲಾಕ್ ಡೌನ್ ನಡುವೆಯೂ ನಟಿ ಶರ್ಮಿಳಾ ಮಾಂಡ್ರೆ ಕಾರು ಚಾಲನೆ ಮಾಡಿ ಅಪಘಾತವೆಸಗಿರುವ ಆರೋಪ ಪ್ರಕರಣ ಸಂಬಂಧ ಮಾಹಿತಿ ನೀಡಲು ಸಂಚಾರ ಪೊಲೀಸರು ಹಿಂದೇಟು ಹಾಕುತ್ತಿದ್ದು, ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ಹೇರಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಎ.4ರಂದು ನಡೆದಿದ್ದ ಅಪಘಾತ ವೇಳೆ ನಟಿ ಶರ್ಮಿಳಾ ಮಾಂಡ್ರೆ, ಆಕೆಯ ಸ್ನೇಹಿತರಾದ ಲೋಕೇಶ್ ವಸಂತ್ ಸೇರಿ ಐವರು ಇದ್ದರು. ಆದರೆ, ಅಪಘಾತ ನಡೆದ ಕುರಿತು ಈ ನಾಲ್ವರು ಪೊಲೀಸರ ವಿಚಾರಣೆಯಲ್ಲಿ ಗೊಂದಲದ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮಾದಕ ವಸ್ತು ಪತ್ತೆ?: ಮಾದಕ ವಸ್ತು ಸೇವಿಸಿ ಜಾಲಿ ರೇಡ್ ಮಾಡಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದು, ಕಾರಿನಲ್ಲೂ ಕೆಲ ಮಾದಕ ವಸ್ತುಗಳು ಇರುವುದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
Next Story