ಸಚಿವ ಮಾಧುಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸಲು ವೆಲ್ಫೇರ್ ಪಾರ್ಟಿ ಆಗ್ರಹ
ಬೆಂಗಳೂರು, ಮೇ 21: ರೈತ ಮಹಿಳೆಯನ್ನು ನಿಂದಿಸಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹಿರ್ ಹುಸೇನ್ ಒತ್ತಾಯಿಸಿದ್ದಾರೆ.
ಅಹವಾಲು ಸಲ್ಲಿಸಲು ಬಂದ ರೈತ ಮಹಿಳೆಯನ್ನು ನಿಂದಿಸಿದ ಮಾಧುಸ್ವಾಮಿ ವರ್ತನೆ ಅಕ್ಷಮ್ಯ. ಮಹಿಳೆ ಬಳಿ ಸಚಿವರು ಕ್ಷಮೆ ಯಾಚಿಸಬೇಕು. ರೈತ ನಮ್ಮ ದೇಶದ ಬೆನ್ನೆಲುಬು ಎಂದರೆ ಮಾತ್ರ ಸಾಲದು, ಅವರಿಗೆ ಸಲ್ಲಬೇಕಾದ ಗೌರವವನ್ನು ನಾವು ಸಲ್ಲಿಸಲೇಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story