ಇಡಲೇಬೇಕೆಂದಾದರೆ "ಬ್ರಿಟಿಷರಿಗೆ ಶರಣಾದ ಸಾವರ್ಕರ್" ಎಂದು ಹೆಸರಿಡಿ : ಎಚ್.ಎಸ್ ದೊರೆಸ್ವಾಮಿ
ಬೆಂಗಳೂರು : ಯಶವಂತಪುರ ಯಲಹಂಕ ಮಾರ್ಗವಾಗಿ ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್ ಗೆ 'ವೀರ ಸಾವರ್ಕರ್' ಎಂದು ಹೆಸರನ್ನಿಡಲು ಮುಂದಾಗಿರುವ ಬಿಜೆಪಿ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಮಾರಂಭವನ್ನು ಮುಂದಕ್ಕೆ ಹಾಕಿದೆ ಎಂದು ವರದಿಯಾಗಿದೆ.
ಯಾವುದೇ ಕಾರಣಕ್ಕೂ ಸಾವರ್ಕರ್ ಹೆಸರನ್ನು ಬಳಸುವುದು ಸಮಂಜಸವಲ್ಲ. ಭಗತ್ ಸಿಂಗ್ ಫ್ಲೈ ಓವರ್ ಎಂದು ನಾಮಕರಣ ಮಾಡಿ. ಸಾವರ್ಕರ್ ಹೆಸರನ್ನು ಇಡಲೇಬೇಕೆಂದಾದರೆ "ಬ್ರಿಟಿಷರಿಗೆ ಶರಣಾದ ಸಾವರ್ಕರ್" ಎಂದು ಹೆಸರಿಸಿ. ಯಾವುದೇ ಕಾರಣಕ್ಕೂ ಇತಿಹಾಸಕ್ಕೆ ಅಪಚಾರ ಮಾಡಬೇಡಿ. ಇಂದಿರಾಗಾಂಧಿಯ ಹೆಸರನ್ನು ಕಾಂಗ್ರೆಸ್ಸಿಗರು ಹೊಟೇಲಿಗೆ ಇಟ್ಟಿದ್ದಾರೆ ಎಂಬ ಕಾರಣಕ್ಕೆ ಸಾವರ್ಕರ್ ಹೆಸರನ್ನು ಫ್ಲೈ ಓವರ್ ಗೆ ಇಡುವುದು ತರವಲ್ಲ. ಎರಡು ತಪ್ಪುಗಳು= ಎರಡು ಸರಿ ಎನ್ನುವುದು ತಪ್ಪು ಎಂದು ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್ ದೊರೆಸ್ವಾಮಿ ಅವರು ತಿಳಿಸಿದ್ದಾರೆ.
Next Story