ಸಾಲದ ಹಣ ಮರುಪಾವತಿಗೆ ಒತ್ತಾಯಿಸಿದ ಯುವಕನ ಮೇಲೆ ಹಲ್ಲೆ; ಆರೋಪ
ಬೆಂಗಳೂರು, ಆ.11: ಸ್ನೇಹಿತನಿಗೆ ಸಾಲ ಕೊಟ್ಟ ವಿಚಾರವಾಗಿ ಯುವಕನೋರ್ವನ ಮೇಲೆ ಗಂಭೀರ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ನಗರದ ವೈಯ್ಯಾಲಿಕಾವಲ್ ನಿವಾಸಿಯಾಗಿರುವ ಪ್ರಭಾಕರ್ ವೃತ್ತಿಯಲ್ಲಿ ಆಟೊ ರಿಕ್ಷಾ ಚಾಲಕರಾಗಿದ್ದು, ಇವರು ತನ್ನ ಸ್ನೇಹಿತ ಶ್ರೀಧರ್ ಅವರಿಗೆ 80 ಸಾವಿರ ರೂ. ಸಾಲ ರೂಪದಲ್ಲಿ ಹಣ ನೀಡಿದ್ದರು ಎನ್ನಲಾಗಿದೆ.
ಆದರೆ, ಕೆಲ ದಿನಗಳ ಬಳಿಕ ಪ್ರಭಾಕರ್ ಅವರು ಶ್ರೀಧರ್ ಬಳಿ ಆಗಾಗ್ಗೆ ಹಣ ವಾಪಸ್ಸು ನೀಡುವಂತೆ ಹೇಳಿದ್ದು, ಇದರಿಂದ ಕೋಪಗೊಂಡಿದ್ದ ಶ್ರೀಧರ್, ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ಪ್ರಭಾಕರ್, ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಈ ಸಂಬಂಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story