ಕಣ್ವ ಸೌಹಾರ್ದ ಸಹಕಾರಿ ಸಂಘ ಅವ್ಯವಹಾರ ಆರೋಪ: ಈಡಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ
ಬೆಂಗಳೂರು, ಆ.11: ಕಣ್ವ ಸೌಹಾರ್ದ ಸಹಕಾರಿ ಸಂಘದಲ್ಲಿ ಅವ್ಯವಹಾರ ಆರೋಪ ಪ್ರಕರಣ ಸಂಬಂಧ ಈಡಿ ಅಧಿಕಾರಿಗಳು ನೆಲಮಂಗಲ ತಾಲೂಕು ಕಚೇರಿಗೆ ಭೇಟಿ ನೀಡಿ, ದಾಖಲೆಗಳ ಪರಿಶೀಲನೆ ನಡೆಸಿದರು.
ಇಲ್ಲಿನ ಅರಿಶಿನಕುಂಟೆ, ಕಣ್ವ ಸೌಹಾರ್ದ ಸಹಕಾರಿ ಸಂಘದಲ್ಲಿ ಅವ್ಯವಹಾರ ಆರೋಪ ಸಂಬಂಧ ಹೈಕೋರ್ಟ್ ಆಸ್ತಿ ಜಪ್ತಿಗೆ ಆದೇಶ ನೀಡಿದ್ದು, ಠೇವಣಿದಾರರ ಹಿತಾಸಕ್ತಿ ಕಾಪಾಡುವಂತೆ ಸಹ ಸೂಚನೆ ನೀಡಿದೆ. ಹಾಗಾಗಿ, ನಾಲ್ವರು ಈಡಿ ಅಧಿಕಾರಿಗಳು ನೆಲಮಂಗಲ ತಾಲೂಕು ಕಚೇರಿಗೆ ಭೇಟಿ ನೀಡಿ, ಕಣ್ವ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆ ನಡೆಸಿದರು.
Next Story