ಬಿಎಸ್ವೈಗೆ ಶಕ್ತಿ ತುಂಬಲು ಅವಿಶ್ವಾಸ ನಿರ್ಣಯ: ವಿಪಕ್ಷ ನಾಯಕ ಸಿದ್ದರಾಮಯ್ಯ
ಫೈಲ್ ಚಿತ್ರ
ಬೆಂಗಳೂರು, ಸೆ.26: ಯಡಿಯೂರಪ್ಪ ಅವರಿಗೆ ಶಕ್ತಿ ತುಂಬಲು ಅವಿಶ್ವಾಸ ನಿರ್ಣಯ ತಂದಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನುಡಿದರು.
ಶನಿವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಆರು ತಿಂಗಳಿಗೊಮ್ಮೆ ಸಿಗುವ ಅವಕಾಶವಿದು. ನಿಮಗೆ ಶಕ್ತಿ ಕೊಡಲೆಂದೇ ಇದನ್ನು ತಂದಿದ್ದೇವೆ ಎಂದು ಹೇಳಿದರು.
ನಾವಿಬ್ಬರು ಒಟ್ಟಿಗೆ ವಿಧಾನಸಭೆಗೆ ಬಂದವರು. ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರುತ್ತೇವೆ. ವೈಯಕ್ತಿಕ ಸಂಬಂಧ ಬೇರೆ ರಾಜಕೀಯ ಬೇರೆ, ರಾಜಕೀಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಅಲ್ಲದೆ, ನಾವು ಕೋವಿಡ್ ಪಾಸಿಟಿವ್ಗೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಮುಖ್ಯಮಂತ್ರಿ ಯಡಿಯೂರಪ್ಪ ಸಹ ನಮ್ಮ ಆರೋಗ್ಯ ವಿಚಾರಿಸಿದರು ಎಂದು ಸಿದ್ದರಾಮಯ್ಯ ತಿಳಿಸಿದರು.
Next Story