ಬೆಂಗಳೂರು ರೋಸ್ ಆನಿಯನ್ ರಫ್ತಿಗೆ ಅವಕಾಶ: ಸೂಕ್ತ ತೀರ್ಮಾನದ ಭರವಸೆ ನೀಡಿದ ಕೇಂದ್ರ ಸಚಿವ ಗೋಯಲ್
ಬೆಂಗಳೂರು, ಸೆ.29: ಬೆಂಗಳೂರು ರೋಸ್ ಆನಿಯನ್ ರಫ್ತಿಗೆ ಇರುವ ನಿರ್ಬಂಧ ಸಡಿಲಿಸುವಂತೆ ಕೋರಿ ಕೇದ್ರ ಸಚಿವ ಪಿಯುಷ್ ಗೋಯಲ್ ಅವರಿಗೆ ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ.ನಾರಾಯಣ ಗೌಡ ಇತ್ತೀಚೆಗೆ ಪತ್ರ ಬರೆದಿದ್ದರು.
ರಫ್ತಿಗೆ ಅವಕಾಶ ನೀಡದಿದ್ದಲ್ಲಿ ರೈತರಿಗೆ ಹಾಗೂ ರಫ್ತುದಾರರಿಗೆ ಸಮಸ್ಯೆ ಆಗಲಿದೆ. ಅಲ್ಲದೆ ಸ್ಥಳೀಯವಾಗಿಯು ಕೂಡ ಬೆಂಗಳೂರು ರೋಸ್ ಆನಿಯನ್ಗೆ ಬೇಡಿಕೆ ಇಲ್ಲ. ರಫ್ತು ಮಾಡದೆ ಇದ್ದಲ್ಲಿ ಸಾಕಷ್ಟು ನಷ್ಟ ಅನುಭವಿಸುತ್ತಾರೆ. ರೈತರ ಬದುಕು ದುಸ್ತರವಾಗುತ್ತೆ. ಹೀಗಾಗಿ ರಫ್ತಿಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಸಚಿವ ನಾರಾಯಣ ಗೌಡ ಪತ್ರಕ್ಕೆ ಉತ್ತರ ಬರೆದಿರುವ ಕೇಂದ್ರ ಸಚಿವ ಪಿಯುಷ್ ಗೋಯಲ್, ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ನಿಮ್ಮ ಪತ್ರ ಬಂದ ತಕ್ಷಣ ಸಂಬಂಧಿಸಿದ ವಿಭಾಗಕ್ಕೆ ಕಳುಹಿಸಲಾಗಿದೆ. ಈ ವಿಚಾರವಾಗಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Next Story