ಎನ್.ಆರ್.ರಮೇಶ್ ಆರೋಪದಲ್ಲಿ ಹುರುಳಿಲ್ಲ: ಶಾಸಕ ಸೋಮಶೇಖರ್ ಸ್ಪಷ್ಟನೆ
ಬೆಂಗಳೂರು, ಅ. 21: ವಿವಿಧ ಕಾಮಗಾರಿ ಗಳಲ್ಲಿ 800 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅವ್ಯವಹಾರ ನಡೆಸಿದ್ದೇನೆಂಬ ಬಿಜೆಪಿ ವಕ್ತಾರ ಎನ್. ಆರ್.ರಮೇಶ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಯಶ ವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಟಿ.ಸೋಮಶೇಖರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ರಮೇಶ್ ಅವರು ಸುಳ್ಳು ಆರೋಪ ಮಾಡಿ ಬ್ಲಾಕ್ಮೇಲ್ ಮಾಡುವುದೇ ಅವರ ದಂಧೆ ಯಾಗಿದೆ. ಯಾವುದೇ ಕಾಮಗಾರಿಗಳಲ್ಲಿ ನನ್ನ ಸಂಬಂಧಿಕರನ್ನು ತೊಡಗಿಸಿಕೊಂಡಿಲ್ಲ ಎಂದು ಹೇಳಿದರು.
ಕ್ಷೇತ್ರದಲ್ಲಿನ ಎಲ್ಲ ಕಾಮಗಾರಿಗಳನ್ನು ಕಾನೂನು ಬದ್ಧವಾಗಿ ನಡೆಸುತ್ತಿದ್ದು, ಯಾವುದೇ ಕಾಮಗಾರಿಗಳಲ್ಲಿ ಪ್ರಸಕ್ತ ಸಂದರ್ಭ ದಲ್ಲಿ ಅವ್ಯವಹಾರ ಸಾಧ್ಯವಿಲ್ಲ. ಆದರೆ, ಕೇವಲ ಪ್ರಚಾರಕ್ಕಾಗಿ ರಮೇಶ್ ತಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
Next Story