ದಾರಿ ಬಿಡದ ಬಿಎಂಟಿಸಿ ಚಾಲಕನಿಗೆ ಪೆಪ್ಪರ್ ಸ್ಪ್ರೇ
ಬೆಂಗಳೂರು,ಎ.16: ಮುಂದೆ ಹೋಗುತ್ತಿದ್ದ ಬಿಎಂಟಿಸಿ ಬಸ್ ದಾರಿ ಬಿಡಲಿಲ್ಲವೆಂದು ಕೋಪಗೊಂಡ ಬೈಕ್ ಸವಾರರು ಚಾಲಕನಿಗೆ ಪೆಪ್ಪರ್ ಸ್ಪ್ರೇ ಮಾಡಿ ಪರಾರಿಯಾಗಿರುವ ಘಟನೆ ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರವಿವಾರ ಬೆಳಗ್ಗೆ ಬಿಇಎಲ್ ವೃತ್ತದ ಬಳಿ ಬಿಎಂಟಿಸಿ ಬಸ್ಸನ್ನು ಚಾಲಕ ಪದ್ಮನಾಭ(32) ಎಂಬವರು ಚಲಾಯಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಹೊಂಡಾ ಆ್ಯಕ್ಟೀವ್ ಬೈಕ್ನಲ್ಲಿ ಬರುತ್ತಿದ್ದ ಇಬ್ಬರು ಸವಾರರು ತಮಗೆ ದಾರಿ ಬಿಡುತ್ತಿಲ್ಲವೆಂದು ಚಾಲಕನ ಜೊತೆ ಜಗಳವಾಡಿ ಪೆಪ್ಪರ್ ಸ್ಪ್ರೇ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಚಾಲಕ ಪದ್ಮನಾಭ ಜಾಲಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
Next Story