ದ್ವಿಚಕ್ರ ವಾಹನದಲ್ಲಿದ್ದ 3ಲಕ್ಷ ರೂ.ಕಳವು
ಬೆಂಗಳೂರು, ಆ. 6: ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್ ಡಿಕ್ಕಿ ತೆರೆದು ಅದರಲ್ಲಿದ್ದ ಮೂರು ಲಕ್ಷ ರೂ.ಹಣವನ್ನು ಕಳವು ಮಾಡಿರುವ ಘಟನೆ ಶಂಕರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ಬೆಳಕಿಗೆ ಬಂದಿದೆ.
ನಗರದ ಬಿಟಿಎಂಲೇಔಟ್ ನಿವಾಸಿ ವಿಜಯ್ಕುಮಾರ್ ಎಂಬುವರ ಹಣ ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಶನಿವಾರ ಮಧ್ಯಾಹ್ನ 11:45ರ ಸುಮಾರಿಗೆ ವಿಜಯಕುಮಾರ್ ಅವರು ಕೋ-ಆಪರೇಟಿವ್ ಬ್ಯಾಂಕ್ನಲ್ಲಿ 3 ಲಕ್ಷ ರೂ.ಹಣ ತೆಗೆದು ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದರು ಎನ್ನಲಾಗಿದೆ.
ಬಳಿಕ ಶಂಕರಪುರದ ಖಾಸಗಿ ಕಣ್ಣಿನ ಆಸ್ಪತ್ರೆಗೆ ಬಂದು ರಸ್ತೆಬದಿ ಸ್ಕೂಟರ್ ನಿಲ್ಲಿಸಿ ಒಳಗೆ ಹೋಗಿ ಬರುವಷ್ಟರಲ್ಲಿ ಡಿಕ್ಕಿಯಲ್ಲಿದ್ದ ಹಣ ಕಳವು ಮಾಡಲಾಗಿದೆ ಎಂದು ಆರೋಪಿಸಿ ಶಂಕರಪುರ ಪೊಲೀಸ್ ಠಾಣೆಗೆ ವಿಜಯಕುಮಾರ್ ದೂರು ನೀಡಿದ್ದಾರೆ.
Next Story