ಇಂದಿರಾ ಕ್ಯಾಂಟೀನ್ ಬಗ್ಗೆ ವಿವಾದಿತ ಟ್ವೀಟ್ :ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ
ಬೆಂಗಳೂರು, ಆ.20: ಹಸಿವು ಮುಕ್ತ ಬೆಂಗಳೂರಿಗಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ಇಂದಿರಾ ಕ್ಯಾಂಟೀನ್ ಬಗ್ಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ವೊಂದು ಹಾಕಿರುವುದು ವಿವಾದವಾಗಿದ್ದು, ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರು ವಾಟ್ಸಪ್ನಲ್ಲಿ ಬಂದ ಸಂದೇಶ ಎಂದು ಉಲ್ಲೇಖಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘ಚಹಾ ಮಾರುತ್ತಿದ್ದ ಮೋದಿ ಅವರು ಪ್ರಧಾನಿಯಾದರು. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಕ್ಯಾಂಟೀನ್ ಶುರು ಮಾಡಿದರು..! ಎಂದು ಬರೆಯಲಾಗಿತ್ತು ಎನ್ನಲಾಗಿದೆ.
ನಿಮ್ಮ ತಕಾರಾರು ಕ್ಯಾಂಟೀನ್ ಅಥವಾ ಇಂದಿರಾ ಹೆಸರಿಗೋ? ನಿಮಗೆ ಹಸಿವಿನ ಬೆಲೆ ಗೊತ್ತಿಲ್ಲಾ ಎಂದು ಜನರು ಸಂಸದರನ್ನು ಟ್ವಿಟ್ಟರ್ನಲ್ಲೇ ತರಾಟೆಗೆ ತೆಗೆದುಕೂಂಡಿದ್ದಾರೆ. ನಿಮ್ಮವರು ಬಿಜೆಪಿ ಮೋದಿ ಹೆಸರು ವೈಭವೀಕರಿಸಬಹುದು. ಆದರೆ ಕಾಂಗ್ರೆಸ್ ಇಂದಿರಾ ಹೆಸರು ಬಳಸುವಂತಿಲ್ಲವೇ? ಈ ಟ್ವೀಟ್ ನಿಮ್ಮ ಮನಸ್ಥಿತಿ ಹೇಗಿದೆ ಎಂಬುವುದನ್ನು ಎತ್ತಿ ತೋರಿಸುತ್ತದೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Via whatsapp ಕಾಲ ಹೇಗಿದೆ ನೋಡಿ.......
— Pratap Simha (@mepratap) August 19, 2017
ಚಹಾ ಮಾರುತ್ತಿದ್ದ ಮೋದಿ ಪ್ರಧಾನಮಂತ್ರಿಯಾದರು...
ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಕ್ಯಾಂಟೀನ್ ಶುರು ಮಾಡಿದ್ರು....!!!