ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಖಂಡಿಸಿ ‘ಪ್ರತಿರೋಧ ರ್ಯಾಲಿ'ಗೆ ಚಾಲನೆ
ಬೆಂಗಳೂರು, ಸೆ.12: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ, ದೇಶದ ಭವಿಷ್ಯದ ಬೆಳಕನ್ನೆ ಕಸಿಯುವ ಅಸಹಿಷ್ಣುತೆಯ ವಿರುದ್ಧ ಗೌರಿ ಲಂಕೇಶ್ ಹತ್ಯೆ ವಿರೋಧಿ ವೇದಿಕೆ ಹಮ್ಮಿಕೊಂಡಿರುವ ‘ಪ್ರತಿರೋಧ ರ್ಯಾಲಿ-ಸಮಾವೇಶ’ಕ್ಕೆ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಇದೀಗ ಚಾಲನೆ ದೊರೆತಿದೆ.
ಪ್ರತಿಭಟನೆಯಲ್ಲಿ ಹಲವು ಹೋರಾಟಗಾರರು ಭಾಗವಹಿಸಿದ್ದಾರೆ. ರೈಲ್ವೆ ನಿಲ್ದಾಣದಿಂದ ಹೊರಟಿರುವ ಮೆರವಣಿಗೆಯಲ್ಲಿ ತಮಟೆ ಮೂಲಕ ಗೌರಿ ಲಂಕೇಶ ಪರ ಬೆಂಬಲಿಗರು ಜಯ ಘೋಷಣೆ ಕೂಗುತ್ತಿದ್ದಾರೆ.
ರ್ಯಾಲಿಯು ಬಳಿಕ ಸಂಗೊಳ್ಳಿ ರಾಯಣ್ಣ ವೃತ್ತ, ಶೇಷಾದ್ರಿ ರಸ್ತೆ, ಸ್ವಾತಂತ್ರ ಉದ್ಯಾನವನ, ಕಾಳಿದಾಸ ರಸ್ತೆ ಮಾರ್ಗವಾಗಿ ಇಲ್ಲಿನ ಸೆಂಟ್ರಲ್ ಕಾಲೇಜು ಆಟದ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ.
Next Story