ಸಿದ್ಧಗಂಗಾ ಶ್ರೀಗಳು ಆಸ್ಪತ್ರೆಗೆ ದಾಖಲು
ಬೆಂಗಳೂರು, ಸೆ.21: ತುಮಕೂರಿನ ಸಿದ್ಧಗಂಗಾ ಶ್ರೀಗಳು ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘‘ತುಂಬಾ ರಿಸ್ಕ್ ಹಿನ್ನೆಲೆಯಲ್ಲಿ ಶ್ರೀಗಳಿಗೆ ಸದ್ಯಕ್ಕೆ ಆಪರೇಶನ್ ಮಾಡುವುದಿಲ್ಲ. ಶ್ರೀಗಳ ಪಿತ್ತನಾಳದಲ್ಲಿ ಕಳೆದ ಮೇನಲ್ಲಿ ಸ್ಟಂಟ್ ಅಳವಡಿಸಲಾಗಿತ್ತು. ಪಿತ್ತನಾಳ ಬ್ಲಾಕ್ ಆಗಿದ್ದರೆ ಓಪನ್ ಆಡುವ ಕೆಲಸ ಮಾಡಬೇಕಾಗಿದೆ. ಬಳಿಕ ಅಗತ್ಯವಿದರೆ ಸಿಟಿ ಸ್ಕಾನಿಂಗ್ ಮಾಡಲಾಗುವುದು. ಶ್ರೀಗಳು, ಜಾಂಡಿಸ್, ಶ್ವಾಸಕೋಶದಲ್ಲಿ ನ್ಯೂಮೋನಿಯಾ, ಪಿತ್ತಕೋಶದಲ್ಲಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶ್ರೀಗಳಿಗೆ ಆ್ಯಂಟಿಬಯೋಟಿಕ್ ನೀಡಲಾಗುತ್ತಿದೆ’’ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ಮುಖ್ಯಸ್ಥ ಡಾ.ರವೀಂದ್ರ ತಿಳಿಸಿದ್ದಾರೆ.
Next Story