ಪೇದೆ ಬಂಧನ
ಬೆಂಗಳೂರು, ಅ.12: ವಿಚಾರಣಾಧೀನ ಕೈದಿಗೆ ಮೊಬೈಲ್ ನೀಡಲು ಯತ್ನಿಸಿದ ಸಿಎಆರ್ ಕಾನ್ಸ್ಟೇಬಲ್ ದಿನೇಶ್ ಎಂಬವರನ್ನು ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಯೊಬ್ಬರಿಗೆ ಮೊಬೈಲ್ ನೀಡಲು ಯತ್ನಿಸಿದಾಗ ಸಿಆರ್ ಕಾನ್ಸ್ಟೇಬಲ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಇವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
Next Story