ನ.5ಕ್ಕೆ ಸಅದಿಯ ಸ್ಪಟಿಕ ಮಹೋತ್ಸವ
ಬೆಂಗಳೂರು, ಅ. 18: ಸಅದಿಯಾ ವಿದ್ಯಾಸಂಸ್ಥೆ ಬೆಂಗಳೂರು ತನ್ನ ಶಿಕ್ಷಣ ಕ್ರಾಂತಿಯ 15ನೆ ಸಂವತ್ಸರಕ್ಕೆ ಕಾಲಿಡುತ್ತಿರುವಾಗ ಸಂಸ್ಥೆಯು ಒಂದು ವರ್ಷದಲ್ಲಿ ಹದಿನೈದು ವಿವಿಧ ಜನುಪಯೋಗಿ ಯೋಜನೆಗಳೊಂದಿಗೆ ‘ಸ್ಪಟಿಕ ಮಹೋತ್ಸವ’ ಆಚರಿಸಲು ತೀರ್ಮಾನಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಬಡ ಮಕ್ಕಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯು ಸ್ಪಟಿಕ ಮಹೋತ್ಸವ 2017ರ ನ.5ರ ಬೆಳಗ್ಗೆ 11ಗಂಟೆಗೆ ಕೊಳಗೇರಿ ಬಾಲಕಿಯರಿಗಾಗಿ ನಿರ್ಮಿಸಿರುವ ಕಟ್ಟಡವನ್ನು ಉದ್ಘಾಟನೆ ಮಾಡಲಾಗುವುದು.
ಫಿಝ್ಝ ಡೆವಲಪರ್ಸ್ನ ಸಹಯೋಗದೊಂದಿಗೆ ಬಾಲಕಿಯರ ನೂತನ ಕಟ್ಟಡವನ್ನು ಸಂಸ್ಥೆಯ ಅಧ್ಯಕ್ಷ ಬಹು ಸಯ್ಯದ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಬಿ.ಎಂ.ಫಾರೂಖ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಂ ಶಾಫಿ ಸಅದಿ ತಿಳಿಸಿದ್ದಾರೆ.
Next Story