ಪ್ರಧಾನಿ ಮೋದಿ, ಅಮಿತಾಬ್, ಆಮಿರ್, ಶಾರೂಕ್ ಮೌನವೇಕೆ: ಶತ್ರುಘ್ನ ಸಿನ್ಹಾ ಪ್ರಶ್ನೆ
ಪದ್ಮಾವತಿ ವಿವಾದ
ಹೊಸದಿಲ್ಲಿ, ನ.22: ಪದ್ಮಾವತಿ ಚಿತ್ರದ ವಿವಾದಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಆಮಿರ್ ಖಾನ್ ಹಾಗು ಶಾರುಖ್ ಖಾನ್ ಮೌನವಾಗಿರುವುದೇಕೆ ಎಂದು ರಾಜಕಾರಣಿ ಹಾಗು ನಟ ಶತ್ರುಘ್ನ ಸಿನ್ಹಾ ಪ್ರಶ್ನಿಸಿದ್ದಾರೆ.
“ಪದ್ಮಾವತಿ ವಿವಾದ ನಡೆಯುತ್ತಿದ್ದರೂ ಪ್ರಸಿದ್ಧ ನಟ ಅಮಿತಾಬ್ ಬಚ್ಚನ್, ಆಮಿರ್ ಖಾನ್, ಶಾರುಖ್ ಖಾನ್ ಕಾಮೆಂಟ್ ಮಾಡಿಲ್ಲ. ನಮ್ಮ ನೆಚ್ಚಿನ ಪ್ರಧಾನಿ ಮೌನವಹಿಸಿದ್ದಾದರೂ ಹೇಗೆ” ಎಂದು ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.
ರಜಪೂತರು ಹಾಗು ಸಂಜಯ್ ಲೀಲಾ ಭನ್ಸಾಲಿಯವರನ್ನು ಮನಸ್ಸಿನಲ್ಲಿಟ್ಟುಕೊಂಡು ಈ ವಿವಾದದ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದು ಸಿನ್ಹಾ ಹೇಳಿದ್ದಾರೆ.
Next Story