ಹೆಬ್ಬುಲಿ ಆಗಿ ಕಿಚ್ಚ ಸುದೀಪ್
ಈ ವರ್ಷ ಕಿಚ್ಚ ಸುದೀಪ್ ತನ್ನ ಅಭಿಮಾನಿಗಳಿಗೆ ಭರಪೂರ ಮನ ರಂಜನೆ ನೀಡಲಿದ್ದಾರೆ ಅವರ ನಾಯಕನಾಗಿರುವ ‘ಕೋಟಿಗೊಬ್ಬ-2’ದ ಚಿತ್ರೀಕರಣ ಶರವೇಗದಲ್ಲಿ ಸಾಗುತ್ತಿದ್ದರೆ, ಮುಕುಂದ ‘ಮುರಾರಿ’ ಕೂಡಾ ಶೂಟಿಂಗ್ ಕೂಡಾ ಮುಕ್ತಾಯದ ಹಂತ ತಲುಪಿದೆ. ಇದರ ಜೊತೆಗೆ ಈಗ ಲೇಟೆಸ್ಟ್ ಆಗಿ ಬಂದಿರುವ ಸುದ್ದಿಯೇನೆಂದರೆ ಸುದೀಪ್ ‘ಹೆಬ್ಬುಲಿ’ಯಾಗಿ ಬೆಳ್ಳಿತೆರೆಯಲ್ಲಿ ಗರ್ಜಿಸಲಿದ್ದಾರೆಂಬುದು. ಹೌದು ಸ್ಯಾಂಡಲ್ವುಡ್ನ ಖ್ಯಾತ ಛಾಯಾಗ್ರಾಹಕ ಎಸ್.ಕೃಷ್ಣ, ಮೊದಲ ಬಾರಿಗೆ ನಿರ್ದೇಶಿ ಸುತ್ತಿರುವ ‘ಹೆಬ್ಬುಲಿ’ ಚಿತ್ರಕ್ಕೆ ಎಪ್ರಿಲ್ 18ರಂದು ಮುಹೂರ್ತ ನೆರವೇರಲಿದೆ.
ಸೂಪರ್ಹಿಟ್ ಚಿತ್ರ ಮಾಣಿಕ್ಯದ ಬಳಿಕ ಸುದೀಪ್ಹಾಗೂ ರವಿಚಂದ್ರನ್ ಹೆಬ್ಬುಲಿಯಲ್ಲಿ ಮತ್ತೆ ಒಂದಾಗ ಲಿದ್ದಾರೆ. ಮಾಣಿಕ್ಯದಲ್ಲಿ ಇವರಿಬ್ಬರು ತಂದೆ ಹಾಗೂ ಮಗನ ಪಾತ್ರದಲ್ಲಿ ನಟಿಸಿದ್ದರು. ಆದರೆ ಈ ಚಿತ್ರದಲ್ಲಿ ಅವರ ಪಾತ್ರಗಳ ಬಗ್ಗೆ ನಿರ್ದೇಶಕರು ಯಾವುದೇ ಮಾಹಿತಿಯನ್ನು ಲೀಕ್ ಮಾಡಿಲ್ಲ. ಚಿತ್ರದ ನಾಯಕಿಯರು ಯಾರೆಂಬುದು ಕೂಡಾ ಇನ್ನೂ ಪ್ರಕಟಿಸಲಾಗಿಲ್ಲ. ಎಸ್.ಕೃಷ್ಣ ನಿರ್ದೇಶನದ ಜೊತೆಗೆ ಕಥೆ ಹಾಗೂ ಚಿತ್ರಕಥೆಯನ್ನು ಕೂಡಾ ಬರೆದಿದ್ದಾರೆ. ಆದರೆ ಕ್ಯಾಮರಾ ನಿರ್ವಹಣೆಯ ಜವಾಬ್ದಾರಿಯನ್ನು ಕರುಣಾಕರನ್ ಎಂಬ ಇನ್ನೋರ್ವ ಪ್ರತಿಭಾವಂತ ಫೋಟೋ ಗ್ರಾಫರ್ಗೆ ಒಪ್ಪಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಅದ್ದೂರಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರದ ಶೂಟಿಂಗ್ ಬೆಂಗಳೂರು, ಲಂಡನ್ಹೈದರಾಬಾದ್, ಐಸ್ಲ್ಯಾಂಡ್, ಆಸ್ಟ್ರೇಲಿಯಾದ ರಮ್ಯ ತಾಣ ಗಳಲ್ಲಿ ನಡೆಯಲಿದೆ.