'ಅಸುರನ್'ಗೆ ರಾಷ್ಟ್ರ ಪ್ರಶಸ್ತಿ ಲಭಿಸದೇ ಇದ್ದರೆ ಪ್ರಶಸ್ತಿಯನ್ನು ಮಾನ್ಯ ಮಾಡುವುದಿಲ್ಲ: ನಿರ್ದೇಶಕ ಅಮೀರ್
Photo: (Twitter/@dhanushkraja)
ಮುಂಬೈ: ಧನುಷ್ ಅಭಿನಯದ 'ಅಸುರನ್' ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸದೇ ಇದ್ದರೆ ಆ ಪ್ರಶಸ್ತಿಯನ್ನು ಪ್ರತಿಷ್ಠಿತ ಪ್ರಶಸ್ತಿಯೆಂದು ಮಾನ್ಯ ಮಾಡುವುದಿಲ್ಲ ಎಂದು ನಿರ್ದೇಶಕ ಅಮೀರ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ 'ಅಸುರನ್' ಚಿತ್ರದ ನಿರ್ದೇಶಕ ವೆಟ್ರಿಮಾರನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಮೀರ್ ಮಾತನಾಡುತ್ತಿದ್ದರು. 'ವಡಾ ಚೆನ್ನೈ' ಚಿತ್ರಕ್ಕೆ ಪ್ರಶಸ್ತಿ ಲಭಿಸದೇ ಇರುವುದಕ್ಕೆ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ವೆಟ್ರಿಮಾರನ್ ಈಗ ಭಾರತೀಯ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರಲ್ಲೊಬ್ಬರು. ಅವರು ತಮಿಳುನಾಡಿನವರೆಂದು ನಾವು ಹೆಮ್ಮೆ ಪಡಬೇಕು,'' ಎಂದೂ ಅಮೀರ್ ಹೇಳಿದರು.
Next Story