'ದುಬೈ ನೆಲ್ಯಾಡಿ ಫ್ರೆಂಡ್ಸ್' ಅಧ್ಯಕ್ಷರಾಗಿ ಶಾಹುಲ್ ನೆಲ್ಯಾಡಿ, ಕಾರ್ಯದರ್ಶಿಯಾಗಿ ರಝಾಕ್ ಕೊಕ್ಕಡ
ಶಾಹುಲ್ ನೆಲ್ಯಾಡಿ - ರಝಾಕ್ ಕೊಕ್ಕಡ
ದುಬೈ, ಮಾ. 24: ಯುಎಇ ಯ ವಿವಿಧ ಭಾಗಗಳಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಕನ್ನಡಿಗರಾದ ನೆಲ್ಯಾಡಿಗರ ಸಂಘಟನೆಯಾದ 'ದುಬೈ ನೆಲ್ಯಾಡಿ ಫ್ರೆಂಡ್ಸ್' ಇದರ ವಾರ್ಷಿಕ ಮಹಾಸಭೆ ದುಬೈಯ ಅಲ್ ಕೂಜ್ ನಲ್ಲಿ ಶಾಹುಲ್ ಹಮೀದ್ ನೆಲ್ಯಾಡಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಸಭೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಫೀಕ್ ಅಪ್ಪಿ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ನಂತರ 2018-19ನೇ ಸಾಲಿಗೆ ನೂತನ ಕಮಿಟಿ ರಚಿಸಲಾಯಿತು.
ಅಧ್ಯಕ್ಷರಾಗಿ ಶಾಹುಲ್ ಹಮೀದ್ ನೆಲ್ಯಾಡಿ, ಉಪಾಧ್ಯಕ್ಷರಾಗಿ ಇಸಾಕ್ ಸಾಹೇಬ್ ಕೌಕ್ರಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಕೊಕ್ಕಡ, ಜತೆ ಕಾರ್ಯದರ್ಶಿಯಾಗಿ ಗಫ್ಫಾರ್ ಕೆ ಇ ಹಾಗು ಕೋಶಾಧಿಕಾರಿಯಾಗಿ ಕಮಲ್ ನೆಲ್ಯಾಡಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಝರ್ ನೆಲ್ಯಾಡಿ, ಜಲೀಲ್ ಬ್ಯಾರಿ ಮೂರಂಕಲ, ರಫೀಕ್ ಅಪ್ಪಿ ಮತ್ತು ಖಲಂದರ್ ನೆಲ್ಯಾಡಿ ಆಯ್ಕೆಯಾದರು.
ಒಂದು ಕೋಟಿ ವೆಚ್ಚದಲ್ಲಿ ಮಸೀದಿ, ಮದ್ರಸ ಕಟ್ಟಡಗಳ ನಿರ್ಮಾಣ ಹಾಗು ಇನ್ನಿತರ ಸಮಾಜ ಮುಖಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಅಝರ್ ನೆಲ್ಯಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಫೀಕ್ ಅಪ್ಪಿ ಸ್ವಾಗತಿಸಿ, ಗಫ್ಫಾರ್ ಕೆ ಇ ವಂದಿಸಿದರು.