ಡಾ.ಅಜಯ್ ಕುಮಾರ್ ರನ್ನು ಭೇಟಿಯಾದ ಸೌದಿ ಅರಬಿಯಾದ ಕಾಂಗ್ರೆಸ್ ಮುಖಂಡರು
ಜುಬೈಲ್, ಎ.28: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಕ್ತಾರ, ಜಾರ್ಖಂಡ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಜೆಮ್ಶೆಡ್ ಪುರದ ಸಂಸದ ಡಾ.ಅಜಯ್ ಕುಮಾರ್ ಸೌದಿ ಅರಬಿಯ ಪ್ರವಾಸದಲ್ಲಿದ್ದು, ಅವರನ್ನು ಸೌದಿ ಅರಬಿಯಾದ ಕಾಂಗ್ರೆಸ್ ಮುಖಂಡರ ನಿಯೋಗವು ಶುಕ್ರವಾರ ಭೇಟಿ ಮಾಡಿತು.
ಇಲ್ಲಿನ ಗೋಲ್ಡನ್ ತುಲಿಪ್ ಪಂಚತಾರಾ ಹೋಟೆಲ್ ನಲ್ಲಿ ಡಾ.ಅಜಯ್ ರನ್ನು ಭೇಟಿಯಾದ ನಿಯೋಗವು ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಿತು.
ಅನಿವಾಸಿ ಸೌದಿ ಅರಬಿಯ ಕಾಂಗ್ರೆಸ್ ಪಕ್ಷವನ್ನು ನೇರವಾಗಿ ಎ.ಐ.ಸಿ.ಸಿ.ಯೊಡನೆ ಸಂಪರ್ಕಿಸುವ ಬಗ್ಗೆ ಚರ್ಚಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಮುಂದಿನ ತಿಂಗಳು ದಿಲ್ಲಿಗೆ ನಿಯೋಗವೂಂದು ಬರುವಂತೆ ಡಾ.ಅಜಯ್ ಆಮಂತ್ರಿಸಿದರು.
ನಿಯೋಗದಲ್ಲಿ ಕಾಂಗ್ರೆಸ್ ಗೌರವಾಧ್ಯಕ್ಷ ಫಾರೂಕ್ ಅಹ್ಮದ್ ಕರ್ನಿರೆ, ಪ್ರಧಾನ ಕಾರ್ಯದರ್ಶಿ ಕೆ.ಎಚ್.ರಫೀಕ್ ಸೂರಿಂಜೆ, ಉಪಾಧ್ಯಕ್ಷ ಕೆ.ಎಂ.ಕಬೀರ್, ಸಂಘಟನಾ ಕಾರ್ಯದರ್ಶಿ ಸಮೀರ್ ಲಕ್ಕಿ ಸ್ಟಾರ್, ಶಮೀಮ್ ಮಲೆನಾಡು, ಉದ್ಯಮಿಗಳಾದ ಅಬ್ದುಲ್ ಹಮೀದ್ ಕಾಪು, ಅಬ್ದುಲ್ ಗಪೂರ್ ಸಜಿಪ ಉಪಸ್ಥಿತರಿದ್ದರು.