ಪತ್ರಕರ್ತ ಖಶೋಗಿ ಹತ್ಯೆ ‘ಹೀನ ಅಪರಾಧ ಕೃತ್ಯ’: ಸೌದಿ ರಾಜಕುಮಾರ ಸಲ್ಮಾನ್
ರಿಯಾದ್, ಅ.24: ಜಮಾಲ್ ಖಶೋಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಪೂರ್ಣಗೊಳಿಸಲು ದೇಶವು ಎಲ್ಲಾ ಪ್ರಯತ್ನವನ್ನು ಮಾಡುತ್ತದೆ ಹಾಗು ನ್ಯಾಯ ಒದಗಿಸುತ್ತದೆ ಎಂದು ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.
ಖಶೋಗಿ ಹತ್ಯೆ ಪ್ರಕರಣವು ‘ಅತ್ಯಂತ ಹೀನ ಅಪರಾಧ ಕೃತ್ಯ’ ಎಂದು ಹೇಳಿದ ಅವರು, “ಈ ಪ್ರಕರಣದಿಂದ ಎಲ್ಲಾ ಸೌದಿ ಪ್ರಜೆಗಳಿಗೆ ನೋವಾಗಿದೆ. ಇದೇ ಪ್ರಕರಣವನ್ನು ಮುಂದಿಟ್ಟು ಸೌದಿ ಮತ್ತು ಟರ್ಕಿಯ ನಡುವೆ ವೈಮನಸ್ಸು ಮೂಡಿಸಲು ಕೆಲವು ಅಪರಿಚಿತ ವಿಮರ್ಶಕರು ಯತ್ನಿಸುತ್ತಿದ್ದಾರೆ. ಆದರೆ ತನ್ನ ತಂದೆ ಸೌದಿಯ ದೊರೆ ಮತ್ತು ತಾನು ರಾಜಕುಮಾರನಾಗಿರುವವರೆಗೆ ಅದು ನಡೆಯದು ಎಂದವರು ಹೇಳಿದರು.
Next Story