ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫಾರಮ್ ವತಿಯಿಂದ ಮಾಜಿ ಪ್ರಧಾನಿ ದೇವೇಗೌಡರಿಗೆ ಸನ್ಮಾನ
ಅಬುಧಾಬಿ, ನ.13: ಭಾರತದ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಬ್ಯಾರೀಸ್ ವೆಲ್ಫೇರ್ ಫಾರಮ್ (ಬಿಡಬ್ಲೂಎಫ್), ಅಬುಧಾಬಿ ಸನ್ಮಾನಿಸಿತು.
ಕರ್ನಾಟಕ ಮೂಲದ ಅನಿವಾಸಿ ಭಾರತೀಯರ ವೇದಿಕೆಯು ದುಬೈಯಲ್ಲಿ ಮಾಜಿ ಪ್ರಧಾನಿಯನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಸಂಸ್ಥೆಯ ನಿಯೋಗವನ್ನು ಮುಹಮ್ಮದ್ ಅಲಿ ಉಚ್ಚಿಲ್, ಅಬ್ದುಲ್ಲಾ ಮಡುಮೂಲೆ, ಹಂಝ ಖಾದರ್ ಮತ್ತು ಇರ್ಫಾನ್ ಅಹ್ಮದ್ ಮುನ್ನಡೆಸಿದರು. ಕೆಎನ್ಆರ್ಐ ಫಾರಮ್ನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ದಾನಿಶ್ ಅಲಿ, ಜಫರುಲ್ಲಾ ಖಾನ್ ಮತ್ತು ಪ್ರಭಾಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Next Story