ಪ್ರವಾದಿ ಸಂದೇಶಗಳು ಜಗತ್ತಿಗೆ ಮಾದರಿ: ನೌಫಲ್ ಕಳಸ
ಕೆಸಿಎಫ್ ದುಬೈ ನಾರ್ತ್ ಝೋನ್ ವತಿಯಿಂದ ಮೀಲಾದ್ ಸಮಾವೇಶ
ದುಬೈ, ನ. 19: ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ನಾರ್ತ್ ಝೋನ್ ಆಯೋಜಿಸಿದ “ಓ ಸಂದೇಶ ವಾಹಕರೇ ತಮ್ಮೆಡೆಗೆ” ಮೀಲಾದ್ ಸಮಾವೇಶ ಶುಕ್ರವಾರ ಸಂಜೆ ದುಬೈ ಅಲ್ ಖಿಸೈಸ್ ಕ್ರೆಸೆಂಟ್ ಇಂಗ್ಲಿಷ್ ಸ್ಕೂಲ್ ಸಭಾಂಗಣದಲ್ಲಿ ನಡೆಯಿತು.
ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶವನ್ನು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ಉದ್ಘಾಟಸಿದರು.
ಮುಖ್ಯ ಪ್ರಭಾಷಕರಾಗಿ ಆಗಮಿಸಿದ ನೌಫಲ್ ಸಖಾಫಿ ಕಳಸ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಫೀಕ್ ಅಹ್ಮದ್ ಮಾಜಿ ಶಾಸಕರು ತುಮಕೂರು ಮಾತನಾಡಿ ಕೆಸಿಎಫ್ ನಡೆಸಿದ ಶ್ಲಾಘನೀಯ ಸೇವೆಗಳನ್ನು ಅಭಿನಂದಿಸಿದರು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸೇವೆಯಲ್ಲಿ ಸಂಘಟನೆಗಳು ತೊಡಗಿಕೊಂಡರೆ ಮಾತ್ರ ಸುಂದರ ಸಮಾಜವನ್ನು ಕಟ್ಟಬಹುದು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ಕೂರತ್ ದುವಾಶೀರ್ವಚನಗೈದರು. ವೇದಿಕೆಯಲ್ಲಿ ಶೈಖ್ ಸಲಾಹ್ ಮೂಸ ಹಸನ್ ಅಲ್ ಮದನಿ, ಡಾ. ಎಂ. ನಝೀರ್ ತುಮಕೂರು, ಸಯ್ಯಿದ್ ಕಣ್ಣವಂ ತಂಙಳ್, ಅಬ್ದುಲ್ ಜಲೀಲ್ ನಿಝಾಮಿ, ಅನ್ವರ್ ನೆಲ್ಲಿಕುನ್ನು, ಇಕ್ಬಾಲ್ ಸಿದ್ದಕಟ್ಟೆ, ರಶೀದ್ ಕೈಕಂಬ, ಅಶ್ರಫ್ ಹಾಜಿ ಅಡ್ಯಾರ್, ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರ್, ಇಸ್ಮಾಯಿಲ್ ಸಅದಿ ಮಾಚಾರ್ ಉಪಸ್ಥಿತರಿದ್ದರು.
ಇಕ್ಬಾಲ್ ಕಾಜೂರ್, ಝೈನುದ್ದೀನ್ ಹಾಜಿ ಬೆಳ್ಳಾರೆ, ರಝಾಕ್ ಹಾಜಿ ಜೆಲ್ಲಿ, ಇಕ್ಬಾಲ್ ಕುಂದಾಪುರ, ಉಸ್ಮಾನ್ ಹಾಜಿ ನಾಪೋಕ್ಲು, ಕರೀಂ ಮುಸ್ಲಿಯಾರ್ ಶಾರ್ಜ, ಬಶೀರ್ ಬೊಳ್ವಾರ್, ಹುಮಯೂನ್ ಬಜ್ಪೆ, ಹಮೀದ್ ಹಾಜಿ ಸ್ಟಾರ್ ಲಿಂಕ್, ರಹಿಮಾನ್ ಸಜಿಪ, ಇಬ್ರಾಹಿಮ್ ಹಾಜಿ ಬ್ರೈಟ್, ಮೂಸಾ ಹಾಜಿ ಬಸರ, ಅಬ್ದುಲ್ ಖಾದರ್ ಸಾಲೆತ್ತೂರು, ಸಹಿತ ಎಲ್ಲಾ ಝೋನ್ ನಾಯಕರು ಮುಖಂಡರುಗಳು ಭಾಗವಹಿಸಿದ್ದರು.
ಅಬ್ದುಲ್ ಅಝೀಝ್ ಲತೀಫಿ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಹಾಗೂ ಕೆಸಿಎಫ್ ಸೌತ್ ಝೋನ್ ನೇತೃತ್ವದಲ್ಲಿ ಬುರ್ದಾ ಆಲಾಪನೆ ಮತ್ತು ದಫ್ ಕಾರ್ಯಕ್ರಮ ನಡೆಯಿತು. ಕೆಸಿಎಫ್ ಸೌತ್ ಝೋನ್ ಹೊರತಂದ ಮೀಲಾದ್ ವಿಶೇಷ ಪುರವಣಿಯನ್ನು ಕೂರತ್ ತಂಙಲ್ ಬಿಡುಗಡೆಗೊಳಿಸಿದರು.
ಝೋನ್ ಕಾರ್ಯದರ್ಶಿ ಹಂಝ ಎಮ್ಮೆಮಾಡು, ಸ್ವಾಗತ ಸಮಿತಿ ಕನ್ವೀನರ್ ಖಲಂದರ್ ಕಬಕ ಸ್ವಾಗತಿಸಿದರು. ಹಮೀದ್ ಸಖಾಫಿ ವಂದಿಸಿ, ನಿಝಾಂ ಮದನಿ ಅಜ್ಮಾನ್ ಕಾರ್ಯಕ್ರಮ ನಿರೂಪಿಸಿದರು. ಕೆಸಿಎಫ್ ನೋರ್ತ್ ಝೋನ್ ರೈಟ್ ಟೀಮ್ ಸ್ವಯಂಸೇವಕರು ಕಾರ್ಯಕ್ರಮ ನಿರ್ವಹಿಸಿದರು.