ಕನ್ನಡಿಗರು ದುಬೈ: ಯುಎಇ ಹುತಾತ್ಮ ಸೈನಿಕರಿಗೆ ಮತ್ತು ಅಗಲಿದ ಕರುನಾಡ ನಾಯಕರಿಗೆ ಶ್ರದ್ಧಾಂಜಲಿ
ದುಬೈ, ಡಿ.2: ಯುಎಇ ದೇಶದ ಹುತಾತ್ಮ ಸೈನಿಕರಿಗೆ ಮತ್ತು ಇತ್ತೀಚೆಗೆ ಅಗಲಿದ ಕರ್ನಾಟಕದ ಮುಖಂಡರಿಗೆ ಕನ್ನಡಿಗರು ದುಬೈ ಸಂಘದ ವತಿಯಿಂದ ಸಂತಾಪ ಸೂಚಕ ಸಭೆ ನಡೆಯಿತು.
ಮಂಕೂಲಿನಲ್ಲಿರುವ ಫಾರ್ಚ್ಯೂನ್ ಗ್ರಾಂಡ್ ಅಪಾರ್ಟ್ಮೆಂಟ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂತಾಪ ಸೂಚಕ ಸಭೆಯು ಕನ್ನಡಿಗರು ದುಬೈ ಸಂಘದ ಅಧ್ಯಕ್ಷ ಸದನ್ ದಾಸ್ ನೇತೃತ್ವದಲ್ಲಿ ಜರುಗಿತು.
ಅಗಲಿದ ಹಿರಿಯ ರಾಜಕಾರಣಿ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟ ಡಾ.ಅಂಬರೀಷ್, ದೇಶದ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ ರಾಜಕಾರಣಿ. ಅನಂತಕುಮಾರ್ ಮತ್ತು ರೈಲ್ವೆ ಖಾತೆಯಲ್ಲಿ ಕ್ರಾಂತಿಯನ್ನೇ ಮಾಡಿದ ಹಿರಿಯ ರಾಜಕಾರಣಿ ಜಾಫರ್ ಶರೀಫ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಆರ್ ಸಿ ಗ್ರೂಪ್ ಆಫ್ ಹೋಟೆಲ್ಸ್ ಮಾಲಕ ರವೀಶ್ ಗೌಡ ಸಂತಾಪ ನುಡಿಗಳನ್ನು ಹೇಳಿದರು. ಕನ್ನಡಿಗರು ದುಬೈ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಎಂ.ಕೆ. ಬೆಂಗಳೂರು ಅವರು ಯುಎಇ ದೇಶದ ಸೈನಿಕರ ಹುತಾತ್ಮ ದಿನದ ಬಗ್ಗೆ ಮಾಹಿತಿ ನೀಡಿದರು
Next Story