ಜನವರಿ 8: ಕೆಸಿಎಫ್ ದುಬೈ ಝೋನ್ ವತಿಯಿಂದ ಬ್ರಹತ್ ಮೀಲಾದ್ ಸಮಾವೇಶ
ಜನವರಿ 8 ಕೆ ಸಿ ಎಫ್ ದುಬೈ ಝೋನ್ ವತಿಯಿಂದ ಬ್ರಹತ್ ಮೀಲಾದ್ ಸಮಾವೇಶ ಪ್ರಚಾರಾರ್ತ
ಮೀಲಾದ್ ವಿಶೇಷ ಸಂಚಿಕೆ "ಅನುಗ್ರಹ" ಬಿಡುಗಡೆ
ಕರ್ನಾಟಕ ಕಲ್ಚರಲ್ ಫೌಂಡೆಶನ್ (ಕೆ ಸಿ ಎಫ್) ದುಬೈ ಝೋನ್ ಇದರ ವತಿಯಿಂದ ಪ್ರವಾದಿ (ಸ ಅ ) ಜನ್ಮ ದಿನದ ಅಂಗವಾಗಿ ಬ್ರಹತ್ ಇಶ್ಕೇ ರಸೂಲ್ ಸಮಾವೇಶ ಹಾಗೂ ಬುರ್ದ ಮಜ್ಲಿಸ್ ಜನವರಿ 8 /2016 ರಂದು ಶುಕ್ರವಾರ ಸಂಜೆ 6 ಗಂಟೆಗೆ ಅಲ್ ರಿಗ್ಗಾ ಮೆಟ್ರೋ ಸ್ಟೇಷನ್ ಬಳಿ ಇರುವ ಫ್ಲೋರಾ ಗ್ರಾಂಡ್ ಹೋಟೆಲಿನಲ್ಲಿ ವಿಜ್ರಂಭನೆಯಿಂದ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೂರ್ಗ್ ಜಂಇಯ್ಯತುಲ್ ಉಲಮ ಇದರ ಪ್ರಧಾನ ಕಾರ್ಯದರ್ಶಿಯೂ ಕೊಡಗು ಜಿಲ್ಲಾ ಸಹಾಯಕ ಖಾಝಿಯೂ ಆದ ಬಹು ಮಹ್ಮೂದ್ ಮುಸ್ಲಿಯಾರ್ ಎಡಪ್ಪಾಲ ,ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ ಅಧ್ಯಕ್ಷರಾದ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು ,ಹಾಗೂ ಕರ್ನಾಟಕ ಸರಕಾರದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಕ್ಫ್ ಇಲಾಖೆ ಸಚಿವರಾದ ಜನಾಬ್ ಖಮರುಲ್ ಇಸ್ಲಾಂ ,ಹಾಗೂ ಇನ್ನಿತರ ಉಲಮಾ ಉಮಾರಾಗಳು ಸಾಮಾಜಿಕ ನೇತಾರರೂ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಮುಂಚಿತವಾಗಿ ನಡೆಯಲಿರುವ ಬುರ್ದ ಮಜ್ಲಿಸ್ ಹಾಗೂ ನಾತೆ ಶರೀಫ್ ಆಲಾಪನೆ ಮಾಡಲು ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಪ್ರತಿಬೋತ್ಸವ 2015 ರ ಸಾಲಿನ ಬಾಲ ಪ್ರತಿಬೆಗಳಾಗಿ ಹೊರ ಹೊಮ್ಮಿದ ದಕ್ಷಿಣ ಕನ್ನಡ ಜಿಲ್ಲೆಯ ಮಾಸ್ಟರ್ ಮುಹಮ್ಮದ್ ಆಶಿಕ್ ಹಾಗೂ ಮಾಸ್ಟರ್ ಮುಹಮ್ಮದ್ ಸಲೀಂ ಭಾಗವಹಿಸಲಿದ್ದಾರೆ,
ಪ್ರಸ್ತುತ ಕಾರ್ಯಕ್ರಮದ ಪ್ರಚಾರಾರ್ತ ಕೆ ಸಿ ಎಫ್ ದುಬೈ ಘಟಕವು "ಅನುಗ್ರಹ" ಎಂಬ ವಿಶೇಷ ಸಂಚಿಕೆಯನ್ನು ಇಂದು ಬೆಳಿಗ್ಗೆ ದುಬೈ ಕೆ ಸಿ ಎಫ್ ಕಚೇರಿಯಲ್ಲಿ ನಡೆದ ಪ್ರವಾದಿ (ಸ ಅ) ರವರ ಜನ್ಮ ದಿನದಿಂದ ಅನುಗ್ರಹೀತವಾದ ಫ಼ಜರ್ ನಮಾಝಿನ ಮುಂಚಿನ ಶುಭಗಳಿಗೆ ಯಲ್ಲಿ ಸೇರಿದ ಹುಬ್ಬುರ್ರಸೂಲ್ ಮಜ್ಲಿಸ್ ಹಾಗೂ ಬುರ್ದ ಮಜ್ಲಿಸ್ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು, ಬುರ್ದಾ ಮಜ್ಲಿಸ್ಗೆ ಅಬ್ದುಲ್ ರಶೀದ್ ಹನೀಫಿ ಸುರಿಬೈಲ್ ನೇತ್ರತ್ವ ನೀಡಿದರು, ಈ ಸಂದರ್ಭದಲ್ಲಿ ಕೆ ಸಿ ಎಫ್ ಶಿಕ್ಷಣ ವಿಭಾಗದ ಅದ್ಯಕ್ಷರಾದ ಅಬ್ದುಲ್ ಅಝೀಝ್ ಲತೀಫಿ,ಸಾಂತ್ವನ ವಿಭಾಗದ ಅದ್ಯಕ್ಷರಾದ ಅಬ್ದುಲ್ಲ ಉಸ್ತಾದ್ ಕುಡ್ತಮುಗೆರ್,ಅಬೂಬಕರ್ ಮುಸ್ಲಿಯಾರ್ ಕೊಡುನ್ಗಾಯಿ,ಅಬ್ದುಲ್ ಹಮೀದ್ ಸಖಾಫಿ ಬೆಳ್ಳಾರೆ,ಇಬ್ರಾಹಿಮ್ ಮುಸ್ಲಿಯಾರ್ ವಿಟ್ಲ ,ಅಬ್ದುಲ್ ರಶೀದ್ ಹನೀಫಿ ಸುರಿಬೈಲ್ ,ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ,ಕೆ ಸಿ ಎಫ್ ದುಬೈ ಝೋನ್ ಪ್ರಧಾನ ಕಾರ್ಯದರ್ಶಿ ಖಲಂದರ್ ಕಬಕ ,ರಫೀಕ್ ಚಾಮಿಯಾಲ್ ಕೊಡಗು, ಇಸ್ಮಾಯಿಲ್ ಬಾಳೆಹೊನ್ನೂರ್,ಮುಂತಾದವರು ಉಪಸ್ತಿತರಿದ್ದರು,