ಅಜ್ಮಾನ್: ನ.15 ರಂದು ಕೆಸಿಎಫ್ 'ಈದ್ ಮಿಲಾದ್ ಸಮಾವೇಶ-19'
ಅಜ್ಮಾನ್, ನ.13: ಪ್ರವಾದಿ ಮುಹಮ್ಮದ್ (ಸ.ಅ) ಅವರ 1494 ನೇ ಜನ್ಮ ದಿನಾಚರಣೆ ಪ್ರಯುಕ್ತ ಕರ್ನಾಟಕ ಕಲ್ಚರಲ್ ಫೌಂಡೇಷನ್ (ಕೆಸಿಎಫ್) ಅಜ್ಮಾನ್ ವತಿಯಿಂದ ನ.15 ರಂದು ಶುಕ್ರವಾರ ಮಧ್ಯಾಹ್ನ ಅಜ್ಮಾನ್ ನ ಕ್ರೌನ್ ಪ್ಯಾಲೇಸ್ ಹೋಟೆಲ್ ನಲ್ಲಿ 'ಪ್ರವಾದಿ ನಮ್ಮ ಜತೆಗಿರಲಿ' ಎಂಬ ಘೋಷವಾಕ್ಯದೊಂದಿಗೆ ಈದ್ ಮಿಲಾದ್ ಕಾನ್ಫರೆನ್ಸ್-19 ನಡೆಯಲಿದೆ.
ಸೆಯ್ಯದ್ ಝೈನುಲ್ ಆಬಿದೀನ್ ಮುತ್ತುಕೊಯ ತಂಙಲ್ ಕಾರ್ಯಕ್ರಮದ ನೇತೃತ್ವ ಮತ್ತು ಪ್ರಾರ್ಥನೆ ನೆರವೇರಿಸಲಿದ್ದಾರೆ. ಖ್ಯಾತ ವಾಗ್ಮಿ ರಾಫೀ ಅಹ್ಸನಿ ಕಾಂತಪುರಂ ಉಪನ್ಯಾಸ ನೀಡಲಿದ್ದಾರೆ.
"ಸರ್ವರಲ್ಲೂ ಕರುಣೆ ತೋರಿರಿ ಎಂಬ ಇಸ್ಲಾಮಿನ ಉದಾತ್ತವಾದ ಸಂದೇಶವನ್ನು ಸಾರುತ್ತಾ ಅಜ್ಮಾನಿನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘ ಶಕ್ತಿ ಕೆಸಿಎಫ್ ಹಲವಾರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಕರ್ನಾಟಕದ ಅಭಿವೃದ್ದಿಗಾಗಿ ಸದಾ ಮುಂಚೂಣಿಯಲ್ಲಿ ನಿಂತು ಕಾರ್ಯಾಚರಿಸುತ್ತಿದೆ. ನಿರಾಶ್ರಿತರಿಗೆ ಆಶ್ರಯ ಯೋಜನೆ, ಶಿಕ್ಷಣ ಸಂಸ್ಥೆಗಳು, ಅಂಬ್ಯುಲೆನ್ಸ್ ಸೇವೆ, ಬಡ ಹೆಣ್ಣುಮಕ್ಕಳ ಮದುವೆ ಕಾರ್ಯಕ್ರಮ, ಮುಂತಾದ ಉತ್ತಮ ಕಾರ್ಯಾಚರಣೆಗಳೊಂದಿಗೆ ಅರಬ್ ರಾಷ್ಟಗಳು ಮಾತ್ರವಲ್ಲದೆ ಮಲೇಷ್ಯಾ ಮತ್ತು ಲಂಡನ್ ನಂತಹ ದೈತ್ಯ ರಾಷ್ಟ್ರಗಳಲ್ಲೂ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿಕೊಂಡಿರಡಿರುತ್ತದೆ. ಯುಎಇಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಮತ್ತು ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಈದ್ ಮಿಲಾದ್ ಸ್ವಾಗತ ಸಮಿತಿ ಸಂಚಾಲಕ ಅಬೂಬಕ್ಕರ್ ಸಿದ್ದೀಕ್ ಪಾಣೆಮಂಗಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.