ಕೆಸಿಎಫ್ ದುಬೈ ಹೋರ್ಲಂಝ್ ಸೆಕ್ಟರ್ ನಿಂದ ಬುರ್ದಾ ಮಜ್ಲಿಸ್, ಜೀಲಾನಿ, ತಾಜುಲ್ ಉಲಮಾ ಅನುಸ್ಮರಣೆ
ದುಬೈ, ಡಿ.17: ಕೆಸಿಎಫ್ ದುಬೈ ಹೋರ್ಲಂಝ್ ಸೆಕ್ಟರ್ ವತಿಯಿಂದ ಬುರ್ದಾ ಮಜ್ಲಿಸ್ ಹಾಗೂ ಜೀಲಾನಿ, ತಾಜುಲ್ ಉಲಮಾ ಅನುಸ್ಮರಣೆ ಇತ್ತೀಚೆಗೆ ಹೋರ್ಲಂಝ್ ನಲ್ಲಿ ನಡೆಯಿತು.
ಬುರ್ದಾ ಮಜ್ಲಿಸ್ ಇಲ್ಯಾಸ್ ಸಅದಿ ಹಾಗೂ ಸ್ವಾದಿಕ್ ರವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಹಿಮಾನ್ ವಹಿಸಿದ್ದರು. ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರಾದ ಜಲೀಲ್ ನಿಝಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ವೈ.ಎಸ್ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಸಖಾಫಿ ಜೀಲಾನಿ, ತಾಜುಲ್ ಉಲಮಾ ಅನುಸ್ಮರಣಾ ಮುಖ್ಯ ಪ್ರಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ದುಬೈ ನೋರ್ತ್ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ ಅಝೀಝ್ ಲತ್ವೀಫಿ, ಹೋರ್ಲಂಝ್ ಸೆಕ್ಟರ್ ಉಸ್ತುವಾರಿ ಹಾಗೂ ದುಬೈ ನೋರ್ತ್ ಝೋನ್ ಇಹ್ಸಾನ್ ವಿಭಾಗದ ಅಧ್ಯಕ್ಷ ಹಮೀದ್ ಸಖಾಫಿ, ದುಬೈ ನೋರ್ತ್ ಝೋನ್ ಕ್ಯಾಬಿನೆಟ್ ನಾಯಕರಾದ ನಿಯಾಝ್ ಬಸರ, ಲತೀಫ್ ಪಾತೂರ್, ಮಜೀದ್ ಮಂಜನಾಡಿ, ಅಲೀ ಕೂಲೂರು, ಅಬ್ಬಾಸ್ ಮಂಜನಾಡಿ, ಸೆಕ್ಟರ್ ಮಾಜಿ ಅಧ್ಯಕ್ಷ ಹಮೀದ್ ಅಳಿಕೆ, ಸೆಕ್ಟರ್ ಕ್ಯಾಬಿನೆಟ್ ನಾಯಕರು ಹಾಗೂ ಸದಸ್ಯರು, ಯೂನಿಟ್ ನ ನಾಯಕರು ಉಪಸ್ಥಿತರಿದ್ದರು
ಸೆಕ್ಟರ್ ಶಿಕ್ಷಣ ವಿಭಾಗದ ಅಧ್ಯಕ್ಷ ಇಬ್ರಾಹಿಂ ಮದನಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಹಬೀಬ್ ಸಜೀಪ ಸ್ವಾಗತಿಸಿ, ಇಬ್ರಾಹಿಂ ಮದನಿ ಧನ್ಯವಾದ ಅರ್ಪಿಸಿದರು.