ಕೆಸಿಎಫ್ ದಮ್ಮಾಮ್ ಝೋನ್ ವತಿಯಿಂದ ಈದ್ ಸಂಗಮ
ದಮ್ಮಾಮ್, ಸೆ.12: ಕೆಸಿಎಫ್ ದಮ್ಮಾಮ್ ಝೋನ್ ವತಿಯಿಂದ ಈದ್ ಸಂಗಮತಾಯಿಫ್ ಮೀಕಾತ್ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆಸಿಎಫ್ ರಾಷ್ಟ್ರೀಯ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಈದ್ ಸಂದೇಶ ನೀಡಿದರು. ಕಲಂದರ್ ಶಾಫಿ ಮಅದನಿ ಕೆಸಿಎಫ್ ಸ್ವಯಂಸೇವಕರಿಗೆ ಮಾರ್ಗದರ್ಶನ ಮಾಡಿದರು.
ರಶೀದ್ ಸಖಾಫಿ ಕುಂಬ್ರ ದುಆ ನೆರವೇರಿಸಿದರು. ಹನೀಫ್ ಮಂಜನಾಡಿ, ಫೈಝಲ್ ಕೃಷ್ಣಾಪುರ, ತಮೀಮ್ ಕೂಳೂರ್, ಶಫೀಕ್ ಕಾಟಿಪಳ್ಳ ಸೇರಿದಂತೆ ಕೆಸಿಎಫ್ ದಮ್ಮಾಮ್, ಜುಬೈಲ್, ಕೋಬರ್, ಅಲ್ ಹಸ್ಸಾದ ಕಾರ್ಯಕರ್ತರು ಉಪಸ್ಥಿತರಿದ್ದರು.
Next Story