ಅಲ್ ಅಮೀನ್ ಫ್ರೆಂಡ್ಸ್ ನಿಂದ ನೆರವು
ದುಬೈ, ಅ.19: ಅಲ್ ಅಮೀನ್ ಫ್ರೆಂಡ್ಸ್ ಡಿಕೆ ಮತ್ತು ಕೆಎಸ್ ಡಿ ಇದರ ಪ್ರಥಮ ವಾರ್ಷಿಕೋತ್ಸವ ಮತ್ತು ಸಾಮೂಹಿಕ ವಿವಾಹದ ಪ್ರಚಾರಾರ್ಥ ಉಪ್ಪಿನಂಗಡಿಯ ಬಡ ಕುಟುಂಬವೊಂದಕ್ಕೆ ಆರ್ಥಿಕ ನೆರವು ನೀಡಲಾಯಿತು.
ದುಬೈನ ದೇರ ಹೋಟೆಲ್ ಲ್ಯಾಂಡ್ ಮಾರ್ಕ್ ನಲ್ಲಿ ಇತ್ತೀಚೆಗೆ ನಡೆದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಅಲ್ ಅಮೀನ್ ಫ್ರೆಂಡ್ಸ್ ಡಿ.ಕೆ ಮತ್ತು ಕೆ.ಎಸ್.ಡಿ ವತಿಯಿಂದ ಉಪ್ಪಿನಂಗಡಿ ಮೂಲದ ದುಬೈಯ ಉದ್ಯಮಿ ಐ.ಅಶ್ರಫ್ ಮೈಸೂರು ಅವರ ಸಹಕಾರದೊಂದಿಗೆ ಒಂದು ಲಕ್ಷ ರೂ. ಮೊತ್ತವನ್ನು ಹಾಜಿ ಮುಸ್ತಫಾ ಕೆಂಪಿಯವರ ಮುಖಾಂತರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಲ್ ಅಮೀನ್ ಫ್ರೆಂಡ್ಸ್ ಡಿ.ಕೆ. ಮತ್ತು ಎಸ್ ಡಿ ಇದರ ನಿರ್ದೇಶಕ ಹಾಜಿ ಮುಸ್ತಫಾ ಕೆಂಪಿ, ಎಸ್ .ಬಿ. ದಾರಿಮಿ ಪುತ್ತೂರು, ಅಡ್ವೊಕೇಟ್ ಹನೀಫ್ ಹುದವಿ, ಕೆ.ಎಂ.ಎ.ಕೊಡುಂಗಾಯಿ, ಕೆ.ಕೆ.ಅಶ್ರಫ್ ಕರಾಯ, ಇಬ್ರಾಹೀಂ ಬ್ಯಾರಿ ಅಗ್ನಾಡಿ, ಅಲ್ತಾಫ್ ಫರಂಗಿಪೇಟೆ, ಹಿದಾಯ ಫೌಂಡೇಷನ್ ಅಧ್ಯಕ್ಷ ಅಹ್ಮದ್ ಬಾವ ನೆಕ್ಕಿಲಾಡಿ, ಹೋಪ್ ಫೌಂಡೇಷನ್ ಸ್ಥಾಪಕ ಸೈಪು ಸುಲ್ತಾನ್, ಬ್ಯಾರಿ ಕಲ್ಚರಲ್ ಫಾರಂ ಉಪಾಧ್ಯಕ್ಷ ಲತೀಫ್ ಮುಲ್ಕಿ ಹಾಗೂ ಅಲ್ ಅಮೀನ್ ಪ್ರೆಂಡ್ಸ್ ಡಿ.ಕೆ &ಕೆ. ಎಸ್.ಡಿ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.