ದುಬೈ: ಡಿ.2ರಂದು ಬೃಹತ್ ಮೆಹಫಿಲೆ ಮುಹಬ್ಬತ್ತ್ ಸಮಾರಂಭ
ದುಬೈ, ನ.30: ಕಾವಳಕಟ್ಟೆಯ ಮೌಲಾನಾ ಡಾ. ಮುಹಮ್ಮದ್ ಫಾಝಿಲ್ ರಜ್ವಿ ಕಾವಳಕಟ್ಟೆಯವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಖಾದಿಸ ಕಾವಳಕಟ್ಟೆ ಯುಎಇ ಸಮಿತಿ ವತಿಯಿಂದ ಬೃಹತ್ ಮೆಹಫಿಲೆ ಮುಹಬ್ಬತ್ತ್ ಮತ್ತು ಯುಎಇ ರಾಷ್ಟ್ರೀಯ ದಿನಾಚರಣೆಯು ಡಿ.2 ರಂದು ಸಂಜೆ 5 ಘಂಟೆಗೆ ದುಬೈ ಮುರಕ್ಕಾಬಾದ್ನಲ್ಲಿರುವ ಜೆಡಬ್ಲ್ಯೂ ಮಾರಿಯಟ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.
ಅಲ್ ಖಾದಿಸ ಶಿಲ್ಪಿಮೌಲಾನಾ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆಯವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಆಹಾರ ಮತ್ತು ನಾಗರಿಕ ವ್ಯವಹಾರ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಶೈಖುನಾ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಅಲ್ಹಾಜ್ ಸಿ.ಎಂ. ಇಬ್ರಾಹೀಂ, ಗ್ರೀನ್ ವ್ಯಾಲಿ ಇಂಟರ್ನ್ಯಾಷನಲ್ನ ಅಧ್ಯಕ್ಷ ಅಬ್ದುಲ್ ಖಾದರ್ ಬಶು ಶಿರೂರು, ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್ನ ಉಪಾಧ್ಯಕ್ಷ ಕೆ.ಎಂ. ರಶೀದ್ ಹಾಜಿ ಬೆಳ್ಳಾರೆ, ದುಬೈ ರುಷ್ತಾಕ್ ಟ್ರೇಡಿಂಗ್ನ ಹಾಜಿ ಅಬ್ದುಲ್ ಜಲೀಲ್, ಹನ್ನಾನ್ ಗ್ರೂಪ್ನ ಅಬ್ದುಲ್ ರಹ್ಮಾನ್ ವನೂ,ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವ, ಸೌದಿ ಅರೇಬಿಯದ ಅಲ್ ಮುಝೈನ್ ಗ್ರೂಪ್ನ ಅಧ್ಯಕ್ಷ ಝಕರಿಯ್ಯ ಜೋಕಟ್ಟೆ, ಸೌದಿ ಅರೇಬಿಯದ ಅಲ್ ಫಲಾಹ್ ಗ್ರೂಪ್ನ ನಝೀರ್ ಹುಸೈನ್ ರೈಸ್ ಕೋ ಗ್ರೂಪ್ನ ಅಬೂಬಕರ್ ಪಡುಬಿದ್ರೆ, ಯುಎಇಯ ಅಲ್ ಖರೈನ್ ಗ್ರೂಪ್ ಆಫ್ ಫಾರ್ಮಸಿಸ್ನ ಸಯ್ಯದ್ ಇಂತಿಯಾಝ್ ಬಾವಜಾನ್ ಸಾಹೇಬ್, ಫಾರೂಕ್ ಉಳ್ಳಾಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಲ್ ಖಾದಿಸ ಇಸ್ಲಾಮಿಕ್ ಕಾಲೇಜಿನ ಪ್ರಾಂಶುಪಾಲ ಯುವ ವಾಗ್ಮಿ ಹಾಫಿಳ್ ಸುಫಿಯಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಅಬುಧಾಬಿಯ ಪ್ರಸಿದ್ಧ ಫರ್ಹತುಲ್ ಹಬೀಬ್ ಬುರ್ದಾ ತಂಡದಿಂದ ಬುರ್ದಾ ಆಲಾಪನೆ, ನಅತೇ ಶರೀಫ್,ಮೌಲೂದ್ ಪಾರಾಯಣ, ಪ್ರವಾದಿ ಕೀರ್ತನಾ ಮಜ್ಲಿಸ್ ಹಾಗೂ ಯುಎಇ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ದೇಶವಿದೇಶಗಳ ಹಲವು ಉದ್ಯಮಿಗಳು, ಸಾಮಾಜಿಕ, ಧಾರ್ಮಿಕ, ಸಾಂಘಿಕ ನಾಯಕರುಗಳು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಲ್ ಖಾದಿಸ ದುಬೈ ಸಮಿತಿ ಅಧ್ಯಕ್ಷ ಬಶೀರ್ ಬೊಳುವಾರು, ಸ್ವಾಗತ ಸಮಿತಿಯ ಚೇರ್ಮನ್ ಫರಾಝ್ ಶೈಖ್ ಕೋಟೆಕಾರ್, ಅಲ್ ಖಾದಿಸ ದುಬೈ ಸಮಿತಿಯ ಕೋಶಾಧಿಕಾರಿ ಬಷೀರ್ ಆಸ್ಟರ್ ಬಂಟ್ವಾಳ, ಸ್ವಾಗತ ಸಮಿತಿಯ ಉಪಾಧ್ಯಕ್ಷ ಅಶ್ರಫ್ ಹಾಜಿ ಅಡ್ಯಾರ್, ಕಮ್ಯುನಿಕೇಷನ್ ಕೋ ಆರ್ಡಿನೇಟರ್ ಅಝೀಮ್ ಉಚ್ಚಿಲ, ಪ್ರೋಗ್ರಾಂ ಕೋ ಆರ್ಡಿನೇಟರ್ ಇಕ್ಬಾಲ್ ಕಾಜೂರು, ಸ್ವಾಗತ ಸಮಿತಿ ಕೋ ಆರ್ಡಿನೇಟರ್ ರಫೀಕ್ ಕಲ್ಲಡ್ಕ,ಮೀಡಿಯಾ ಕೋ ಆರ್ಡಿನೇಟರ್ ರಿಯಾಝ್ ಕೊಂಡಂಗೇರಿ, ಕೋ ಆರ್ಡಿನೇಟರ್ ಶರೀಫ್ ಹೊಸ್ಮಾರ್ ಮತ್ತಿತರರು ಉಪಸ್ಥಿತರಿದ್ದರು.