ಡಿಕೆಎಸ್ ಸಿ ವತಿಯಿಂದ ಕರಾವಳಿ ಫ್ಯಾಮಿಲಿ ಮುಲಾಖತ್
ಉಮ್ರಾ ಯಾತ್ರೆ ಅದೃಷ್ಟ ಗಿಟ್ಟಿಸಿದ ಮಹಿಳೆ
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟ್ರೀಯ ಸಮಿತಿಯು ಜ.1ರಂದು ಹಮ್ಮಿಡ ಗ್ರಾಂಡ್ ಕರಾವಳಿ ಫ್ಯಾಮಿಲಿ ಮುಲಾಖತ್ ಶಾರ್ಜಾ ಮಲಿಹ ರಸ್ತೆಯಲ್ಲಿರುವ ಆಯಿಷ್ ವೆಡ್ಡಿಂಗ್ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಾಸ್ಟರ್ ಮೊಹಿಯುದ್ದೀನ್ ಹಾಫಿಲ್ ರವರ ಕಿರಾಅತ್ ನೊಂದಿಗೆ ಸೈಯದ್ ಅಸ್ಗರ್ ಅಲಿ ತಂಙಳ್ ದುವಾ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಫ್ಯಾಮಿಲಿ ಮುಲಖಾತ್ ಸ್ವಾಗತ ಸಮಿತಿ ಛೇರ್ಮನ್ ಅಬ್ದುಲ್ ಲತೀಫ್ ಮುಲ್ಕಿ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಡಿ.ಕೆ.ಎಸ್.ಸಿ ಅಜ್ಮಾನ್ ಘಟಕದ ಗೌರವಾಧ್ಯಕ್ಷರಾದ ಅಬೂಬಕ್ಕರ್ ಮದನಿ ಕೆಮ್ಮಾರ ಫ್ಯಾಮಿಲಿ ಮುಲಾಖಾತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಾಗತ ಭಾಷಣ ಮಾಡಿದ ಡಿ.ಕೆ.ಎಸ್.ಸಿ, ಯು.ಎ.ಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್ ಸಂಘಟನೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಮಗ್ರಿಬ್ ನಮಾಝಿನ ನಂತರ ನಡೆದ ಸಮಾರೋಪಕ್ಕೆ ಯುಎಇ ರಾಷ್ಟ್ರೀಯ ಸಮಿತಿ ಗೌರವ ಅಧ್ಯಕ್ಷರಾದ ಸೈಯದ್ ತ್ವಾಹ ಬಾಫಖಿ ತಂಙಳ್ ದುಃವಾ ಮೂಲಕ ಸಭೆಗೆ ಚಾಲನೆ ನೀಡಿದರು. ಯುಎಇ ರಾಷ್ಟೀಯ ಸಮಿತಿಯ ಉಪಾಧ್ಯಕ್ಷರಾದ ಎಂ.ಇ. ಮೂಳೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪ್ರಸ್ತುತ ಕಾರ್ಯಕ್ರಮಕ್ಕಾಗಿ ಆಗಮಿಸಿದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಹಾಜಿ ಕಿನ್ಯ ಮಾತನಾಡಿ, ಡಿ.ಕೆ.ಎಸ್.ಸಿ ಯುಎಇ ಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಸಮಿತಿ ಉಪಾಧ್ಯಕ್ಷರು ಯುಎಇ ರಾಷ್ಟೀಯ ಸಮಿತಿ ಉಸ್ತುವಾರಿಯು ಆದ ಹಾಜಿ ಹಾತೀಮ್ ಕೂಳೂರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಡಿ.ಕೆ.ಎಸ್.ಸಿ ಯ ಹಿರಿಯ ಸಲಹೆಗಾರರು ಆದ ಹಾಜಿ ಮೊಯಿದೀನ್ ಕುಟ್ಟಿ ಕಕ್ಕಿಂಜೆ ಶುಭ ಹಾರೈಸಿ ಮಾತನಾಡಿದರು.
ವೇದಿಕೆಯಲ್ಲಿ ಫ್ಯಾಮಿಲಿ ಮುಲಖಾತ್ ಸ್ವಾಗತ ಸಮಿತಿ ಛೇರ್ಮನ್ ಅಬ್ದುಲ್ ಲತೀಫ್ ಮುಲ್ಕಿ, ಸೈಯದ್ ಅಸ್ಗರ್ ಅಲಿ ತಂಙಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್ , ಕೇಂದ್ರ ಸಮಿತಿ ಸದಸ್ಯರಾದ ಜಮಾಲ್ ಅಬೂಸಾಲಿಹ್ ಕಣ್ಣಂಗಾರ್, ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಬಿ.ಎ.ತುಂಬೆ (ಮೊಯಿದ್ದೀನ್) ವುಡ್ ವರ್ಕ್ಸ್ ಘಟಕದ ಮ್ಯಾನೇಜರ್ ಮುಹಮ್ಮದ್ ಅನ್ವರ್, ಜನಾಬ್ ಝೈಯಿನುದ್ದೀನ್ ಬೆಳ್ಳಾರೆ , ಬಶೀರ್ ಬೊಳುವಾರ್ ಮೊದಲಾದವರು ಉಪಸ್ಥಿತರಿದ್ದರು.
ಫ್ಯಾಮಿಲಿ ಮುಲಾಖತ್ ಜನರಲ್ ಕನ್ವಿನರ್ ಎಸ್.ಯೂಸುಫ್ ಅರ್ಲಪದವು ಸ್ವಾಗತಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಉಮ್ಮರ್ ಎಸ್.ಎಂ. ಹಾಗೂ ಕಮಲ್ ಅಜ್ಜಾವರ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸೇರಿದ ಸುಮಾರು 850ಕ್ಕೂ ಹೆಚ್ಚು ಜನರಲ್ಲಿ ಅದೃಷ್ಟ ಚೀಟಿ ಮೂಲಕ ಒಬ್ಬರಿಗೆ ಪವಿತ್ರ ಉಮ್ರಾ ಯಾತ್ರೆಗೆ ಅವಕಾಶ ಕಲ್ಪಿಸಲಾಯಿತು.