ಮಸ್ಕತ್ : ಭಾರತದ ವ್ಯಕ್ತಿ ಹೃದಯಾಘಾತದಿಂದ ನಿಧನ
ಮಸ್ಕತ್,ಫೆ. 15: ಕಲ್ಲಿಕೋಟೆಯ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೆಮುಂಡು ಮಾರಂಚೇರಿಯ ಅಬ್ದುಲ್ ರಶೀದ್(54) ಮೃತರಾದ ವ್ಯಕ್ತಿ.
ಕೆಫಟೇರಿಯ ಉದ್ಯೋಗಿಯಾಗಿದ್ದ ಅವರು ಮಂಗಳವಾರ ಬೆಳಗ್ಗಿನ ನಮಾಝ್ ನಿರ್ವಹಿಸಿದ ಬಳಿಕ ಮಬೇಲಾದ ವಾಸಸ್ಥಳದಲ್ಲಿ ನಿದ್ರಿಸಲೆಂದು ಮಲಗಿದ್ದಾಗ ಅಸೌಖ್ಯ ಕಾಡಿತ್ತು. ಕೋಣೆಯಲ್ಲಿ ಅವರ ಜೊತೆಯಿದ್ದ ವ್ಯಕ್ತಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸುವಷ್ಟರಲ್ಲಿ ಅವರು ನಿಧನ ಹೊಂದಿದ್ದರು.
ಮೃತದೇಹವನ್ನು ಊರಿಗೆ ಕೊಂಡೊಯ್ಯುವ ಕುರಿತ ಅಗತ್ಯ ಪ್ರಕ್ರಿಯೆಗಳು ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
Next Story