ಸೌದಿ: ಕುಸಿದು ಬಿದ್ದು ಭಾರತೀಯನ ಸಾವು
ಕಮೀಸ್ ಮುಶೈತ್,ಫೆ.18: ಕೇರಳದ ವ್ಯಕ್ತಿಯೊಬ್ಬರು ಕೆಲಸ ಮಾಡುತ್ತಿರುವ ವೇಳೆ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮಂಜೇರಿ ಕುಟ್ಟಿಯಾರಂ ತೊಡಿ ಪಾಟ್ಟಾಲ್ ಇಬ್ರಾಹೀಂ ಕುಟ್ಟಿ ಮೃತರಾದ ವ್ಯಕ್ತಿ(50). ನಿನ್ನೆ ಅವರು ತನೂಮದ ಅಂಗಡಿಯಲ್ಲಿ ಸಾಮಾನು ಕೆಳಗಿಳಿಸುವ ವೇಳೆ ಕುಸಿದು ಬಿದ್ದಿದ್ದರು. ಇಲ್ಲಿನ ಆರ್ಸಿ ಕೋಲದ ಸೇಲ್ಸ್ಮೆನ್ ಆಗಿ ಕಳೆದ 25ವರ್ಷಗಳಿಂದ ಕೆಲಸಮಾಡುತ್ತಿದ್ದರು. ರಜೆ ಮುಗಿಸಿ ನಾಲ್ಕುದಿವಸದ ಹಿಂದೆ ಅವರು ಊರಿನಿಂದ ತನೂಮಕ್ಕೆ ಮರಳಿದ್ದರು. ಮೃತದೇಹವನ್ನು ಊರಿಗೆ ಕೊಂಡುಹೋಗಲು ಅಗತ್ಯ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದು ವರದಿ ತಿಳಿಸಿದೆ.
Next Story