ನಾಯಿಗಳಿಗೆ ಜೀವಂತ ಬೆಕ್ಕನ್ನು ಅಹಾರವಾಗಿ ನೀಡಿದವರಿಗೆ ಶಿಕ್ಷೆ
ದುಬೈ,ಮಾ. 16: ಜೀವಂತ ಬೆಕ್ಕನ್ನು ನಾಯಿಗಳಿಗೆ ಆಹಾರವಾಗಿ ನೀಡಿದ ಮೂರು ಮಂದಿಗೆ ದುಬೈಯಲ್ಲಿ ಮೃಗಾಲಯ ಶುಚೀಕರಿಸುವ ಶಿಕ್ಷೆ ನೀಡಲಾಗಿದೆ. ಯುಎಇ ಪ್ರಧಾನಮಂತ್ರಿ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮುಕ್ತೂಂ ತಪ್ಪಿತಸ್ಥರಿಗೆ ಈ ಶಿಕ್ಷೆ ನೀಡಲು ಆದೇಶಿಸಿದರು.
ಕಳೆದ ಬುಧವಾರ ಎಮಿರೇಟ್ನ ಪ್ರಜೆ ಸಹಿತ ಮೂವರು ತಮ್ಮ ಎರಡು ನಾಯಿಗಳ ಗೂಡಿಗೆ ಜೀವಂತ ಬೆಕ್ಕನ್ನು ಬಿಟ್ಟಿದ್ದರು. ನಾಯಿಗಳು ಬೆಕ್ಕನ್ನು ಕಚ್ಚಿ ತಿಂದ ದೃಶ್ಯವನ್ನು ಎಮಿರೇಟ್ ಪ್ರಜೆ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದ. ಆನಂತರ ಘಟನೆ ವಿವಾದವಾಗಿತ್ತು. ದುಬೈ ಪೊಲೀಸರು ಇವರನ್ನು ಬುಧವಾರವೇ ಬಂಧಿಸಿದರು. ನಂತರ ಪ್ರಧಾನ ಮಂತ್ರಿಶೇಕ್ ಮುಹಮ್ಮದ್ ಬಿನ್ ರಾಶಿದ್ ಅಲ್ಮಕ್ತೂಂ ಮೃಗಾಲಯ ಗುಡಿಸುವ ಶಿಕ್ಷೆಯನ್ನು ನೀಡಿಆದೇಶಿಸಿದ್ದಾರೆ.
ಇವರು ಪ್ರತಿ ದಿವಸ ನಾಲ್ಕು ಗಂಟೆಕಾಲ ಮೂರು ತಿಂಗಳು ಮೃಗಾಲಯ ಗುಡಿಸಿ ಶುಚಿಗೊಳಿಸಬೇಕಾಗಿದೆ. ಆರೋಪಿಗಳ ಈ ಕ್ರೌರ್ಯದ ಮನರಂಜನೆ ಇಸ್ಲಾಮಿಗೆ ವಿರುದ್ಧವಾಗಿದೆ. ಆದರೆ ಅವರ ಪಾರಿವಾಳವನ್ನು ಬೆಕ್ಕು ಆಕ್ರಮಿಸಿತ್ತು ಎನ್ನುವ ಕಾರಣದಿಂದ ಜೀವಂತ ಬೆಕ್ಕನ್ನು ನಾಯಿಗೂಡಿಗೆ ಹಾಕಿದ್ದೇವೆಂದು ಆರೋಪಿಗಳು ಹೇಳಿಕೊಂಡಿದ್ದಾರೆ.