ಕೆಸಿಎಫ್ ರಬುವ ಸೆಕ್ಟರ್ 'ವಾರ್ಷಿಕ ಮಹಾಸಭೆ' ನೂತನ ಅಧ್ಯಕ್ಷರಾಗಿ ಸಿರಾಜುದ್ದೀನ್ ವಳಾಲು ಆಯ್ಕೆ
ರಿಯಾದ್, ಮಾ.18: ಕೆಸಿಎಫ್ ರಬುವ ಸೆಕ್ಟರ್ ಇದರ ಮಹಾಸಭೆಯು ಮಾ.17ರಂದು 'ದಾರುಲ್ ಫಲಾಹ್ ' ರಬುವದಲ್ಲಿ ನಡೆಯಿತು.
ಇಲ್ಯಾಸ್ ಅಜ್ಜಿಕಟ್ಟೆ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯನ್ನು ಪಿ.ಕೆ.ಎಂ. ಹನೀಫ್ ಉರುವಾಲು ಪದವು ಸ್ವಾಗತಿಸಿದರು. ಇಸ್ಮಾಯಿಲ್ ಮದನಿ ವಿಟ್ಲ ಕಿರಾಅತ್ ಪಠಿಸಿದರು. ICF ರಬುವ 'ದುಅವಾ ಅಧ್ಯಕ್ಷ ನಿಝಾರ್ ಲತೀಫಿ ಉದ್ಘಾಟಿಸಿದರು.
ಪ್ರ.ಕಾರ್ಯದರ್ಶಿ ಪಿ.ಕೆ.ಎಂ. ಹನೀಫ್ ಮಂಡಿಸಿದ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಅಬ್ದುಲ್ ರಶೀದ್ ಮದನಿ (ಶಿಕ್ಷಣ ವಿಭಾಗ ಕನ್ವೀನರ್, ಬತ್ತಾ ಸೆಕ್ಟರ್) ಇವರು 'ಜೀವನ ನಾಡಿಗಾಗಿ, ನಾಳೆಗಾಗಿ' ಎಂಬ ವಿಷಯದ ಬಗ್ಗೆ ಮುಖ್ಯ ಭಾಷಣ ಮಾಡಿದರು.
ನಂತರ ಚುಣಾವಣಾ ವೀಕ್ಷಕರಾಗಿ ಆಗಮಿಸಿದಂತ ಸಲೀಮ್ ಕನ್ಯಾಡಿ(ರಿಲೀಫ್ ಅಧ್ಯಕ್ಷ ಕೆಸಿಎಫ್ ರಾಷ್ಟ್ರೀಯ ಸಮಿತಿ) ಇವರ ಮೆಲ್ನೋಟದಲ್ಲಿ ಹಳೆಯ ಸಮಿತಿ ಬರ್ಕಾಸು ಗೊಳಿಸಿ ನೂತನ ಸಮಿತಿ ಆಯ್ಕೆ ಗೊಳಿಸಲಾಯಿತು.
2017-19 ನೂತನ ಸಮಿತಿ ವಿವರ:
ಅಧ್ಯಕ್ಷರು: ಸಿರಾಜುದ್ದೀನ್,ವಳಾಲು, ಪ್ರ.ಕಾರ್ಯದರ್ಶಿ: ಪಿ.ಕೆ.ಎಂ.ಹನೀಫ್,ಉರುವಾಲು ಪದವು, ಕೋಶಾಧಿಕಾರಿ: ಯಾಕುಬ್ ಮದನಿ,ಉರುವಾಲು ಪದವು, ಶಿಕ್ಷಣ ವಿಭಾಗ ಅಧ್ಯಕ್ಷ: ಇಸ್ಮಾಯಿಲ್ ಮದನಿ ವಿಟ್ಲ, ಶಿಕ್ಷಣ ವಿಭಾಗ ಕಾರ್ಯದರ್ಶಿ: ಅಶ್ರಫ್ ಮದನಿ,ಮಡಂತ್ಯಾರು, ಸಾಂತ್ವನ ವಿಭಾಗ ಅಧ್ಯಕ್ಷ: ಇಲ್ಯಾಸ್ ಅಜ್ಜಿಕಟ್ಟೆ, ಸಾಂತ್ವನ ವಿಭಾಗ ಕಾರ್ಯದರ್ಶಿ: ಅಶ್ರಫ್ ಕೊಪ್ಪ, ಸಂಘಟನಾ ವಿಭಾಗ ಅಧ್ಯಕ್ಷ: ಸಂಶುದ್ದೀನ್,ಉಜಿರೆ, ಸಂಘಟನಾ ವಿಭಾಗ ಕಾರ್ಯದರ್ಶಿ: ಹಮೀದ್,ಮಂಜನಾಡಿ, ಪಬ್ಲಿಶಿಂಗ್ ವಿಭಾಗ ಅಧ್ಯಕ್ಷ: ಪಿ.ಕೆ.ಎಂ.ಆಸಿಫ್,ಉರುವಾಲು ಪದವು, ಪಬ್ಲಿಶಿಂಗ್ ವಿಭಾಗ ಕಾರ್ಯದರ್ಶಿ: ಅಬ್ದುರ್ಹ್ಮಾನ್ ಕಾಟಿಪಳ್ಳ
ಕಾರ್ಯಕಾರಿ ಸಮಿತಿ ಸದಸ್ಯರು: ಸ್ಹಾಖ್ ಮದನಿ,ಉರುವಾಲು ಪದವು, ಸಿದ್ದೀಖ್,ಸುಳ್ಯ, ಉಮರ್,ಕಂಬಳಬೆಟ್ಟು, ತೌಸೀಫ್,ಕನ್ಯಾನ, ಅಬ್ದುಲ್ ಮಜೀದ್ , ಮುಡಿಪು, ಕಾಸಿಂ ಕುಕ್ಕಾಜೆ, ಮುಹಮ್ಮದಲಿ N.r.ಪುರ, ಅಶ್ರಫ್,ಮಡಂತ್ಯಾರ್, ಅಬ್ಬಾಸ್,ಉರುವಾಲು ಪದವು, ಮನ್ಸೂರ್,ಬಂಟ್ವಾಳ, ಶಮೀರ್ ಕರುವೇಲು, ಫಾರೂಖ್,ಮಳಲಿ, ಯವರನ್ನು ಆರಿಸಲಾಯಿತು.
ನೂತನ ಸಮಿತಿಯನ್ನು ಕೆಸಿಎಫ್ ಝೋನಲ್ ನಾಯಕ 'ಇಸ್ಮಾಯಿಲ್,ಕನ್ನಂಗಾರ್ ಹಾಗೂ ಅಶ್ರಫ್ ವಳಾಲು ಮಾತನಾಡುವ ಮೂಲಕ ಶುಭಾಶಯ ಗೈದರು.