ದುಬೈ: ಕನ್ನಡಿಗರು ದುಬೈ ಕೂಟದಿಂದ ಎ.28ರಂದು ‘ಸಂಗೀತ ಸೌರಭ 2017’
ಮೋಡಿ ಮಾಡಲಿದೆ ಡಾ.ಕದ್ರಿಗೋಪಾಲನಾಥ್-ಪಂಡಿತ್ ಪ್ರವೀಣ್ ಗೊಡ್ಕಿಂಡಿ ಜೋಡಿ ಜುಗಲ್ಬಂಧಿ
ದುಬೈ, ಎ.26: ಕನ್ನಡಿಗರು ದುಬೈ ಹಾಗೂ ಪ್ರೆಶಿಯಸ್ ಪಾರ್ಟಿಸ್ ಮತ್ತು ಎಂಟರ್ ಟೈನ್ಮೆಂಟ್ ಎಲ್.ಎಲ್.ಸಿ. ದುಬೈ ಇದರ ವತಿಯಿಂದ ‘ಸಂಗೀತ ಸೌರಭ 2017’ ಒಂದು ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಎ.28ರಂದು ಸಂಜೆ 5:30ಕ್ಕೆ ದುಬೈಯ ಅಲ್ ಕೂಸ್ನಲ್ಲಿರುವ ಕ್ರೆಡೆನ್ಸ್ ಹೈಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
‘ಸಂಗೀತ ಸೌರಭ’ದಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್ ಮತ್ತು ಖ್ಯಾತ ಕೊಳಲುವಾದಕ ಪಂಡಿತ್ ಪ್ರವೀಣ್ ಗೊಡ್ಕಿಂಡಿಯವರ ಜುಗಲ್ಬಂಧಿ ಸಂಗೀತ ಹಾಗೂ ಆಲ್ ಓಕೆ ತಂಡದಿಂದ ಕನ್ನಡ ರ್ಯಾಪ್ ಹಾಡುಗಳ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.
Next Story